
Advertisement
ಕೊಪ್ಪಳ : ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಅವರ 40ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಹೊಸಪೇಟೆ ರಸ್ತೆಯ ಕೆಎಂಎಸ್ ಕಚೇರಿಯಲ್ಲಿ ಕೆ.ಎಂ.ಸೈಯದ್ ಅಭಿಮಾನಿ ಬಳಗ ಸರಳ ಜನ್ಮ ದಿನ ಆಚರಿಸಿತು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯದ್ ಅವರು, ಈ ನಿಮ್ಮ ಅಭಿಮಾನ ಪ್ರೀತಿ ನನಗೆ ಸಂತಸ ತಂದಿದೆ ಎಂದರು.
ನಂತರ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್ ಹಾಗೂ ಅನಾಥ ಆಶ್ರಮದ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಜಾಫರಸಾಬ ಸಂಗಟಿ, ಕೆ.ಎಂ.ಸೈಯದ್ ಅಭಿಮಾನಿ ಬಳಗದ ಎಫ್.ಎ.ನೂರುಬಾಷ, ಯುವ ಮುಖಂಡ ಸಲೀಂ ಅಳವಂಡಿ, ಸಾದೀಕ್ ಕುದರಿಮೋತಿ, ಇಬ್ರಾಹಿಂ, ವಸಿಂ, ಸಂತೋಷ ಬೂದಿಹಾಳ ಮತ್ತಿತರರು ಪಾಲ್ಗೊಂಡಿದ್ದರು.