ವಿಜಯಸಾಕ್ಷಿ ಸುದ್ದಿ, ನರಗುಂದ
Advertisement
ಮನೆಯೊಂದರಲ್ಲಿ 35 ಕ್ಕೂ ಹೆಚ್ಚು ಹಾವಿನ ಮರಿಗಳು ಪತ್ತೆಯಾಗಿರುವ ಘಟನೆ ಪಟ್ಟಣದ ವಿದ್ಯಾಗಿರಿಯಲ್ಲಿ ನಡೆದಿದೆ.
ಕಮಲಾಕ್ಷಿ ಕುಲಕರ್ಣಿ ಎಂಬುವವರಿಗೆ ಸೇರಿದ ಮನೆಯಲ್ಲಿ ಅಪರೂಪದ ಹಾವಿನ ಮರಿಗಳು ಪತ್ತೆಯಾಗಿದ್ದು, ಹಾವಿನ ಮರಿಗಳನ್ನು ಕಂಡು ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.

35 ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಉರಗ ತಜ್ಞ ಬಿ.ಆರ್ ಸುರೇಬಾನ ಅವರಿಂದ ರಕ್ಷಿಸಲಾಗಿದೆ. ಹಾವಿನ ಮರಿಗಳನ್ನು ರಕ್ಷಿಸಿದ ನಂತರ ಸುರೇಬಾನ್ ಅವರು ಕಾಡಿಗೆ ಬಿಟ್ಟು ಬಂದಿದ್ದಾರೆ.
