ಕಂದಕಕ್ಕೆ ಉರುಳಿದ ಸಾರಿಗೆ ಸಂಸ್ಥೆ ಬಸ್; ಗ್ಲಾಸ್ ಒಡೆದು ಹೊರ ಬಂದ ಪ್ರಯಾಣಿಕರು

0
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ

Advertisement

ತಾಲೂಕಿನ ಕದಾಂಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿಸಿ ಬಸ್ ಉರುಳಿ ಬಿದ್ದಿದ್ದು, ಪ್ರಾಣ ಉಳಿಸಿಕೊಳ್ಳಲು ಪ್ರಯಾಣಿಕರು ಕಿಡಕಿ ಗ್ಲಾಸ್ ಒಡೆದು ಹೊರ ಬಂದ ಘಟನೆ ಜರುಗಿದೆ.

ಬಸ್ ನಲ್ಲಿ ಸುಮಾರು 45 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಬಸ್ ಗೆ ಬೈಕ್ ಅಡ್ಡಬಂದಿದ್ದು, ಚಾಲಕ ಬೈಕ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ನ್ನು ರಸ್ತೆ ಬದಿಗೆ ತಿರುಗಿಸಿದಾಗ ಬಸ್ ಉರಳಿ ಬಿದ್ದಿದೆ.

ಸ್ಥಳೀಯರು ಬಸ್ ನ ಗ್ಲಾಸ್ ಒಡೆದು ಪ್ರಯಾಣಿಕರು ಹೊರಬರಲು ಸಹಾಯ ಮಾಡಿದರು.

ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಮುಂಡರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here