
-334 ಮತಗಳ ಅಂತರದ ಗೆಲುವು
Advertisement
ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಕಳೆದ ಕೆಲ ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿದ್ದ ಶರಣೇಗೌಡ ಪೊಲೀಸ್ಪಾಟೀಲ ಹೇರೂರು 334 ಮತಗಳ ಅಂತರದಿಂದ ಗೆಲುವಯ ಸಾಧಿಸಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 8,925 ಮತಗಳ ಪೈಕಿ 5,779 ಮತಗಳು ಚಲಾವಣೆಯಾಗಿದ್ದು ಕಣದಲ್ಲಿ ಉಳಿದಿದ್ದ ಶರಣೇಗೌಡ ಪೊಲೀಸ್ಪಾಟೀಲ ಹೇರೂರು ಅವರು 2,816 ಮತಗಳು, ವೀರಪ್ಪ ಮಲ್ಲಪ್ಪ ನಿಂಗೋಜಿ 2,482 ಮತಗಳು ಹನುಮಂತಪ್ಪ ಅಂಡಗಿ 375 ಹಾಗೂ ಹನುಮಂತಪ್ಪ ವಡ್ಡರ್ 25 ಮತಗಳನ್ನು ಪಡೆದಿದ್ದಾರೆ. 81 ಮತಗಳು ತಿರಸ್ಕೃತಗೊಂಡಿವೆ.