ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹೊಳೆ ಆಲೂರು: ಮಳೆ ಬಂದರೆ ಸಾಕು ಹೊಳೆ ಆಲೂರು ಗ್ರಾಮದ ಒಳಗಿನ ರಸ್ತೆಗಳೆಲ್ಲಾ ಕೆಸರುಗದ್ದೆಯಾಗುತ್ತವೆ.
Advertisement
ಗ್ರಾಮದ ಪ್ರಮುಖ ರಸ್ತೆಗಳಾದ ಬದಾಮಿ ಕ್ರಾಸ್, ರೈಲ್ವೇ ಅಂಡರ್ ಪಾಸ್, ಆಲೂರು ವೆಂಕಟರಾಯರ ವೃತ್ತವೆಲ್ಲವೂ ಕೆಸರುಮಯವಾಗುತ್ತವೆ.
ಒಂದೆಡೆ ಮಳೆನೀರಿನಿಂದ ಈ ಪರಿಸ್ಥಿತಿಯಾದರೆ, ಮತ್ತೊಂದೆಡೆ ರೈಲ್ವೇ ಸ್ಟೇಷನ್ ನಿಂದ ರಸ್ತೆಗೆ ಹರಿದುಬರುವ ನೀರಿನಿಂದ ಅಂಡರ್ ಪಾಸ್ ಸೇರಿದಂತೆ ಸುತ್ತಮುತ್ತಲ ಪ್ರದೇಶ ಕೆರೆಯಾಗಿ ಮಾರ್ಪಡುತ್ತದೆ.
ಸಣ್ಣ ಮಳೆಗೆ ಈ ಪರಿಸ್ಥಿತಿಯಾದರೆ, ಇನ್ನು ಪ್ರವಾಹ ಬಂದಾಗಲೆಲ್ಲಾ ಗ್ರಾಮಕ್ಕೆ ನೀರ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಸ್ಥಳೀಯ ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಏನೂ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ.