HomeIndia Newsಕೇರಳ ಸಂಪುಟದಲ್ಲಿ ಪತ್ರಕರ್ತೆಗೆ ಒಲಿದ ಅದೃಷ್ಟ!

ಕೇರಳ ಸಂಪುಟದಲ್ಲಿ ಪತ್ರಕರ್ತೆಗೆ ಒಲಿದ ಅದೃಷ್ಟ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ತಿರುವನಂತಪುರ

ಎಲ್ ಡಿಎಫ್ ಸಚಿವ ಸಂಪುಟದಲ್ಲಿ ಆರೋಗ್ಯ ಖಾತೆಗೆ ಸಚಿವರನ್ನು ನೇಮಿಸುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ ಇದೀಗ ಪತ್ರಕರ್ತೆ ವೀಣಾ ಜಾರ್ಜ್ ಅವರನ್ನು ಕೇರಳದ ಆರೋಗ್ಯ ಸಚಿವೆಯಾಗಿ ಆಯ್ಕೆ ಮಾಡಲಾಗಿದೆ.

ಕಳೆದ ಬಾರಿ ಕೇರಳದ ಆರೋಗ್ಯ ಸಚಿವೆಯಾಗಿದ್ದ 64 ವರ್ಷದ ಕೆಕೆ ಶೈಲಜಾ ಅವರು ಕೋವಿಡ್-19 ನಿರ್ವಹಣೆಯಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದರು. ಅದಕ್ಕೂ ಮುಂಚಿತವಾಗಿ ಅಂದರೆ 2018 ರಲ್ಲಿ ನಿಫಾ ವೈರಸ್ ಹರಡುವಿಕೆಯ (2018) ಸವಾಲುಗಳನ್ನು ಎದುರಿಸುವಲ್ಲಿ ಆರೋಗ್ಯ ಸಚಿವೆಯಾಗಿ ಕೆಕೆ ಶೈಲಜಾ ಅವರು ಉತ್ತಮ ಸಾಧನೆ ಮಾಡಿದ್ದರು. ಆದರೆ ಈ ಬಾರಿಯ ಸಚಿವ ಸಂಪುಟದಿಂದ ಅವರನ್ನ ಕೈಬಿಡಲಾಗಿದೆ.

ಕೇರಳ ರಾಜ್ಯವು ಕಳೆದ ಬಾರಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಾದರಿ ರಾಜ್ಯ ಎನಿಸಿಕೊಳ್ಳಲು ಶೈಲಜಾ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೂ ಈ ಬಾರಿ ಶೈಲಜಾ ಅವರ ಆಯ್ಕೆಯಾಗದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಶೈಲಜಾ ಅವರ ಜನಪ್ರಿಯತೆ ಹೆಚ್ಚುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

ಇದೀಗ ಕೇರಳದ ಸಚಿವೆಯಾಗಲಿರುವ ವೀಣಾ ಜಾರ್ಜ್ ಅವರು ಎರಡು ಬಾರಿ ಶಾಸಕಿಯಾಗಿದ್ದು, ಕೇರಳ ವಿಧಾನಸಭೆಯಲ್ಲಿ ಅರನ್ಮುಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರಿಗೆ ನಾಯಕತ್ವದ ಗುಣಗಳು, ಪ್ರಬುದ್ಧ ಸಂವಹನ ಮತ್ತು ಉತ್ತಮ ಅಭಿವ್ಯಕ್ತಿ ಭಾಷಣ ಕಲೆ ಇದೆ.

ವೀಣಾ ಜಾರ್ಜ್ ಅವರು 2016 ರಲ್ಲಿ ಚುನಾವಣಾ ಕಣದಲ್ಲಿ ಅಚ್ಚರಿಯ ಪ್ರವೇಶ ಪಡೆದಿದ್ದರೂ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಶಿವಡಾಸನ್ ನಾಯರ್ ಅವರನ್ನು 7,646 ಮತಗಳ ಅಂತರದಲ್ಲಿ ಸೋಲಿಸಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!