ಕೊಪ್ಪಳದ ಅಜ್ಜನ‌ ಜಾತ್ರೆ ರದ್ದು!!

0
Spread the love

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ:
ಶತಮಾನಗಳಿಂದ ನಡೆದುಕೊಂಡು ಬಂದ ಕೊಪ್ಪಳ ಗವಿಮಠ ಜಾತ್ರೆ ರದ್ದಾಗಿದೆ.
ದಕ್ಷಿಣ ಭಾರತದ ಮಹಾಕುಂಭ ಮೇಳ, ಉತ್ತರದ ಸಿದ್ಧಗಂಗೆ ಎಂಬ ಖ್ಯಾತಿಯ ಗವಿಮಠ ಜಾತ್ರೆ
ಕೊರೊನಾ ಹಾಗೂ ಓಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ
ಜಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದು
ಮಾಡಿರುವುದಾಗಿ ಗವಿಮಠದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

Advertisement

ಪ್ರತಿ ವರ್ಷ ಜಾತ್ರೆಯಲ್ಲಿ 5-6 ಲಕ್ಷ ಜನ ಸೇರುತ್ತಿದ್ದರು.
15 ದಿನಗಳ ನಡೆಯುತ್ತಿದ್ದ ಜಾತ್ರೆ ಈ ವರ್ಷ ಜನವರಿ 19 ರಂದು ನಡೆಯಬೇಕಿದ್ದ ಮಹಾರಥೋತ್ಸವವೂ ರದ್ದಾಗಿದೆ. ಆದರೆ
ಸಂಪ್ರದಾಯಬದ್ದವಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ಈಗ ಗವಿಸಿದ್ದೇಶ್ವರ ಕರ್ತೃ ಗದ್ದುಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಒಂದು ವೇಳೆ ಕೊರೊನಾ ಸೋಂಕು ಹೆಚ್ಚಾದರೆ ಶ್ರೀಮಠದ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುವುದು ಎಂದು
ಗವಿಮಠದ ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here