ಕೋಳಿಗೆ ಬೇಧಿ ಹತ್ತೈತ್ರಿ, ದವಾಖಾನಿಗೆ ಹೊಂಟೇನಿ ನನ್ನ ಬಿಡ್ರಿ ಸಾಹೇಬ್ರ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಮನುಷ್ಯರ ಜೀವಕ್ಕೆ ತೊಂದರೆಯಾದರೂ ಹೊರಗೆ ಬಾರದ ಸ್ಥಿತಿಯಲ್ಲಿ ಇಂದು ಜನರಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೋಳಿಗೆ ಬೇಧಿ ಹತ್ತಿದೆ ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಬಂದಿರುವ ಹಾಸ್ಯಾಸ್ಪದ ಘಟನೆ ನಗರದಲ್ಲಿ ನಡೆದಿದೆ.

ನಗರದ ಟಾಂಗಾಕೂಟ ವೃತ್ತದಲ್ಲಿ ಈ ಘಟನೆ ನಡೆದಿದೆ. ನಗರದ ಸರಾಫ್ ಬಜಾರ್ ನ ವ್ಯಕ್ತಿಯೇ ಈ ರೀತಿ ಕಾರಣ ಹೇಳಿರುವ ವ್ಯಕ್ತಿ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಕೋಳಿ ಹಿಡಿದು ಬಂದ ಈ ವ್ಯಕ್ತಿ, ತನ್ನನ್ನು ತಡೆದ ಪೊಲೀಸರಿಗೆ ಕೋಳಿಯ ಬಗ್ಗೆ ಹೇಳಿದ್ದಾನೆ. ಬೆಳಿಗ್ಗೆಯಿಂದ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ. ಈ ವ್ಯಕ್ತಿಯ ಕಾರಣ ಕೇಳಿ ಒಂದು ಕ್ಷಣ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಹೀಗಿದ್ದರೂ ಈ ವ್ಯಕ್ತಿ, ಕೋಳಿಯ ನೆಪ ಹೇಳಿಕೊಂಡು ಹೊರಗೆ ಬಂದಿದ್ದಾನೆ. ಕೋಳಿಯ ಬೇಧಿಯ ಕಾರಣ ಕೇಳಿ ಪೊಲೀಸರಿಗೆ ತಡೆಯಲಾರದಷ್ಟು ನಗು ಬಂದಿದೆ. ಈ ವ್ಯಕ್ತಿಯಿಂದಾಗಿ ಲಾಕ್ ಡೌನ್ ನ ಟೆನ್ಶನ್ ನಲ್ಲಿದ್ದ ಪೊಲೀಸರಿಗೆ ಮನರಂಜನೆ ಸಿಕ್ಕಂತಾಗಿದೆ.

ಈ ಕೋಳಿ ಸದಾಕಾಲ ನನ್ನೊಂದಿಗೆ ಇರುತ್ತಿತ್ತು. ಕುಂತರೆ, ನಿಂತರೂ ಇದು ನನ್ನ ಬಿಟ್ಟು ಅಗಲುತ್ತಿರಲಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಇದಕ್ಕೆ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಟೆನ್ಶನ್ ಆಗಿ, ಪಶು ಆಸ್ಪತ್ರೆಗೆ ಚಿಕಿತ್ಸೆಗೆ ಹೊರಟಿದ್ದೇನೆ ಎಂದು ಕೋಳಿಯ ಮಾಲೀಕ ಹೇಳಿದ್ದಾನೆ.


Spread the love

LEAVE A REPLY

Please enter your comment!
Please enter your name here