ವಿಜಯಸಾಕ್ಷಿ ಸುದ್ದಿ, ಗದಗ
ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಸರಕಾರ ಹತ್ತು ಹಲವು ನಿರ್ಬಂಧಗಳನ್ನು ಹೇರಿದರೂ ಜನರು ಮಾತ್ರ ಸುದಾರಿಸುತ್ತಿಲ್ಲ. ಅದರಲ್ಲೂ ದುಡ್ಡಿನ ಆಸೆಗೆ ಬಿದ್ದಿರುವ ವರ್ತಕರದಂತೂ ಹೇಳತೀರದಾಗಿದೆ. ಯಾವುದೇ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಮಾತ್ರ ಕೊಡಲಾಗಿದೆ. ಆದರೆ ಬಟ್ಟೆಗಳನ್ನು ಮಾರಾಟ ಮಾಡಲು ಅವಕಾಶ ಇಲ್ಲ. ಆದರೂ ಬೆಟಗೇರಿಯ ರಜಪೂತಗಲ್ಲಿಯಲ್ಲಿ ಅಂಗಡಿ ತೆರದು ಭರ್ಜರಿ ವ್ಯಾಪಾರ ಮಾಡುತ್ತಿದ್ದ ಎಸ್ ಟಿ ವನ್ನಾಲ್ ಬಟ್ಟೆ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿ ಮಾಲೀಕ ಹಾಗೂ ಮಗನ ಮೇಲೆ ಸೋಂಕು ಹರಡಲು ಕಾರಣವಾದ ಕೇಸ್ ಜಡಿದಿದ್ದಾರೆ.
ರಜಪೂತಗಲ್ಲಿಯ ಬಟ್ಟೆ ಅಂಗಡಿಯ ಮಾಲೀಕ ಶಿವರಾಮ್ ತಪ್ಪಣ್ಣ ವನ್ನಾಲ್ ಹಾಗೂ ಮಗ ನಾರಾಯಣ ಶಿವರಾಮ ವನ್ನಾಲ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸರಕಾರದ ಆದೇಶ ಉಲ್ಲಂಘಿಸಿದ್ದು ಅಲ್ಲದೇ ಜನರು ಮಾಸ್ಕ್, ಸಾಮಾಜಿಕ ಅಂತರ ಮರೆತು ವ್ಯಾಪಾರದಲ್ಲಿ ತೊಡಗಿದ್ದು ಸೋಂಕು ಹರಡಲು ಅವಕಾಶ ಮಾಡಿಕೊಡಲಾಗಿತ್ತು.
ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಮಾಹಿತಿ ನೀಡಿದ್ದಾರೆ.



