ಕೋವಿಡ್ ನಿಯಮ ಉಲ್ಲಂಘನೆ; ಪಲ್ಲವಿ ಹೋಟೆಲ್‌ ಮೇಲೆ ಕೇಸ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಹೋಟೆಲ್ ನಲ್ಲಿ ಗ್ರಾಹಕರಿಗೆ ಉಪಹಾರ ಹಾಗೂ ಊಟ ಕೊಟ್ಟ ಆರೋಪದ ಹಿನ್ನೆಲೆಯಲ್ಲಿ ನಗರದ ಹೊಸಬಸ್ ನಿಲ್ದಾಣದ ಹತ್ತಿರದ ಪಲ್ಲವಿ ಹೋಟೆಲ್ ಮಾಲೀಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೋವಿಡ್ ನಿಯಮದಂತೆ ಹೋಟೆಲ್ ನಲ್ಲಿ ಗ್ರಾಹಕರಿಗೆ ಅವಕಾಶ ಇಲ್ಲ. ಕೇವಲ ಪಾರ್ಸಲ್ ಮಾತ್ರ ಕೊಡಬೇಕು.

ಹೋಟೆಲ್ ಗೆ ಡಿಎಆರ್ ಹೆಡ್ ಕ್ವಾರ್ಟರ್ಸ್ ನ ಶಶಿಧರ ಶರಣಪ್ಪ ಹಡಗಲಿ ಎಂಬ ಅಧಿಕಾರಿ ಭೇಟಿ ಕೊಟ್ಟ ಸಮಯದಲ್ಲಿ ಗ್ರಾಹಕರಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಂಡು ಬರಲಿಲ್ಲ. ಸ್ಯಾನಿಟೇಸರ್ ಮಾಡದೇ, ಥರ್ಮಲ್ ಸ್ಕ್ಯಾನರ್‌ ಹೋಟೆಲ್ ನಲ್ಲಿ ಇಡದೇ ಕೊರೋನಾ ಸೋಂಕು ಹರಡಲು ಪ್ರೇರೇಪಣೆ ನೀಡಿದ್ದಾರೆ ಎಂದು ಪಲ್ಲವಿ ಹೋಟೆಲ್ ಮಾಲೀಕ ಸುಧಾಕರ ಸಿದ್ದಯ್ಯ ಶೆಟ್ಟಿ ಎಂಬುವರು ಮೇಲೆ 2020 ರ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here