ವಿಜಯಸಾಕ್ಷಿ ಸುದ್ದಿ, ಗದಗ
Advertisement
ಇಲ್ಲಿನ ಶಿದ್ದಲಿಂಗ ನಗರದಲ್ಲಿ ಶ್ರೀ ಜಾಗೃತ ಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಶ್ರೀ ಗಜಾನನ ಮಂಟಪದಲ್ಲಿ ಶುಕ್ರವಾರ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಲಸಿಕಾ ಅಭಿಯಾನ ನಿಮಿತ್ತ ಉಚಿತ ಕೋವಿಡ್ ಲಸಿಕೆ ಹಾಕಲಾಯಿತು. ಸುಮಾರು 300 ಜನರಿಗೆ ಲಸಿಕೆ ಹಾಕಲಾಯಿತು. ಇದೇ ಸಮಯದಲ್ಲಿ 104 ಅಜ್ಜಿ ಲಸಿಕೆ ಪಡೆದಿದ್ದು ವಿಶೇಷವಾಗಿತ್ತು.

ಶಿದ್ಧಲಿಂಗ ನಗರ ಶ್ರೀ ಜಾಗೃತ ಗಜಾನನ ಯುವಕ ಮಂಡಳಿಯ ಡಾ. ಜಯಕುಮಾರ ಬ್ಯಾಳಿ, ಸಿದ್ದು ಅಂದಾನಗೌಡರ, ಸೂರಜ್ ಜಿಗಜಿನ್ನಿ, ಮಂಜು ಅಂಗಡಿ, ಸಂತೋಷ ಮಾಳಶೆಟ್ಟಿ, ದೀಪಕ್ ಬೊಮ್ಮನಹಳ್ಳಿ, ಸಂಗಮೇಶ ಗೊಂದಿ, ಸಿದ್ದು ಪುಟಾಣಿ, ಸುನೀಲ್ ಕಲಾಲ, ಬಸವರಾಜ್ ಹೂಗಾರ, ನಿಖಿಲ್ ವರ್ಣೆಕರ ಸೇರಿದಂತೆ ಇತರರು ಇದ್ದರು.