ಗದಗ ಜಿಲ್ಲೆಗೆ ಶುಭ ಶುಕ್ರವಾರ; ಒಂದೇ ದಿನ 530 ಜನ ಬಿಡುಗಡೆ; 195 ಜನರಿಗೆ ಸೋಂಕು

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯ ಮಟ್ಟಿಗೆ ಇವತ್ತು ಶುಭದಿನ. ಕಳೆದ ಹಲವು ದಿನಗಳಿಂದ ಕೇವಲ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ ಸೋಂಕಿನಿಂದ ಗುಣಮುಖರಾಗುತ್ತಿದ್ದವರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಇವತ್ತು ಒಂದೇ ದಿನ 530 ಜನರು ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯ ಜನತೆ ನಿಟ್ಟಿಸಿರು ಬಿಡುವಂತಾಗಿದೆ. ಇದರಿಂದಾಗಿ ಇದುವರೆಗೂ 5871 ಜನ ಬಿಡುಗಡೆಯಾದಂತಾಗಿದೆ.

Advertisement

ಇವತ್ತು 195 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

195 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7310 ಕ್ಕೇರಿದೆ. 1335 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಶುಕ್ರವಾರದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 104 ಕ್ಕೇರಿದೆ.

ಗದಗ-105, ಮುಂಡರಗಿ-21, ನರಗುಂದ-02, ರೋಣ-35, ಶಿರಹಟ್ಟಿ-26, ಹೊರ ಜಿಲ್ಲೆಯ 06 ಪ್ರಕರಣ ಸೇರಿದಂತೆ ಒಟ್ಟು 195 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ, ರಾಜೀವಗಾಂಧಿ ನಗರ, ಹುಡ್ಕೋ ಕಾಲೋನಿ, ಗೌಡರ ಓಣಿ, ಮಕಾನ ಗಲ್ಲಿ, ಜಿಮ್ಸ್ ಆಸ್ಪತ್ರೆ, ಜೆ.ಟಿ.ಕಾಲೇಜ ರಸ್ತೆ, ಗಂಗಿಮಡಿ, ಕುರಟ್ಟಿಪೇಟ, ತಾಜ ನಗರ, ಶಿವಾನಂದ ನಗರ, ಎ.ಪಿ.ಎಂ.ಸಿ, ಮಾನ್ವಿ ಚಾಳ, ಚೇತನಾ ಕ್ಯಾಂಟಿನ, ಕೆ.ಸಿ.ರಾಣಿ ರಸ್ತೆ, ರಾಮ ಮಂದಿರ ಹತ್ತಿರ, ವಿಭೂತಿ ಓಣಿ,

ಜೆ.ಟಿ.ಮಠದ ಹತ್ತಿರ, ಕೇಶವ ನಗರ, ಪಿ.ಎನ್.ಟಿ. ಕ್ವಾಟರ್ಸ್, ಶಿವಾಜಿ ನಗರ, ಹೊಸಪೇಟ ಚೌಕ, ಶಿವಾನಂದ ನಗರ, ವಿ.ಎನ್.ಟಿ. ರಸ್ತೆ, ಪಲ್ಲೇದ ಓಣಿ, ಕಳಸಾಪುರ ರಸ್ತೆ, ಮಂಜುನಾಥ ಶಾಲೆಯ ಹತ್ತಿರ, ಶಹಪುರ ಪೇಟ, ಶ್ರೀನಿವಾಸ ಭವನ ಹಿಂದುಗಡೆ, ನಂದೀಶ್ವರ ನಗರ, ರಂಗಪ್ಪಜ್ಜನ ಮಠ, ಎಸ್.ಬಿ.ನಗರ, ಅಮರೇಶ್ವರ ನಗರ, ಗಂಗಾಪುರ ಪೇಟ, ಆದರ್ಶ ನಗರ,

ಗದಗ ತಲೂಕಿನ ಮುಳಗುಂದ, ಬಿಂಕದಕಟ್ಟಿ, ಬೆನಕೊಪ್ಪ, ಹಾಳಕೇರಿ, ಚಿಂಚಲಿ, ಹೊಂಬಳ, ಅಡವಿಸೋಮಾಪುರ, ಕಣಗಿನಹಾಳ, ಸೊರಟೂರ, ನಾಗಾವಿ, ಮಲ್ಲಸಮುದ್ರ, ಹುಲಕೋಟಿ, ಚಿಕ್ಕಹಂದಿಗೋಳ, ಲಕ್ಕುಂಡಿ, ಕಣವಿ, ಹೊಸೂರ, ಅಂತೂರ-ಬೆಂತೂರ,  ಬಳಗಾನೂರ, ಕುರ್ತಕೋಟಿ, ಸಂಭಾಪುರ,  

ಮುಂಡರಗಿ ತಾಲೂಕಿನ ಮುರಡಿ ತಾಂಡಾ, ಹಮ್ಮಗಿ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ,

ನರಗುಂದ ತಾಲೂಕಿನ ಚಿಕ್ಕ ನರಗುಂದ ರೋಣ ಪಟ್ಟಣದ ಕೊಪ್ಪದರ ಓಣಿ, ಮಲ್ಲಮ್ಮ ದೇವಸ್ಥಾನದ ಹತ್ತಿರ, ಶಿವಾನಂದ ನಗರ,  ತಾಲೂಕು ಆಸ್ಪತ್ರೆ ಹತ್ತಿರ,

ರೋಣ ತಾಲೂಕಿನ ಮಾರನಬಸರಿ, ಹೊಳೆಆಲೂರ, ಅಬ್ಬಿಗೇರಿ, ಜಿಗಳೂರ, ರಾಜೂರ, ಹಾಳಕೇರಿ, ಮಸೂತಿ ಹತ್ತಿರ, ಹುನಗುಂಡಿ, ಹೊನ್ನಾಪುರ,  ಭೊಮ್ಮಸಾಗರ, ಸೂಡಿ, ಸವಡಿ, ಗಜೇಂದ್ರಗಡ ಪಟ್ಟಣದ ಭೂಮರೆಡ್ಡಿ ವೃತ್ತ, ಸಂಗನಾಳ ಪ್ಲಾಟ. 

ಶಿರಹಟ್ಟಿ ಪಟ್ಟಣದ ನೆಹರು ನಗರ, ವಿಜಯನಗರ, ಮಜ್ಜಗಿ ಓಣಿ, ಹನುಮಂತ ನಗರ, ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ, ಶಿಗ್ಲಿ, ಅಡರಳ್ಳಿ, ಮ್ಯಾಕಲಝರಿ, ಬನ್ನಿಕೊಪ್ಪ, ಹೊಸಳ್ಳಿ, ಗುಲಗಂಜಿಕೊಪ್ಪ, ಲಕ್ಷ್ಮೇಶ್ವರದ ಗಂಗಾಧರ ಓಣಿ, ಸೋಮೇಶ್ವರ ನಗರ, ಇಂದಿರಾನಗರ.

 

Need a quick and reliable Bangalore airport drop? Aishwarya Taxi ensures on-time service with professional drivers and comfortable vehicles. Trust us to make your airport journey safe, convenient, and stress-free.

An airport taxi is the best way to ensure a hassle-free journey to and from the airport. Arjun Cabs provides a reliable, affordable, and comfortable airport taxi service for travelers. Whether you’re traveling for business, leisure, or in a group, we have the perfect solution for you. Book your ride today and experience the convenience of a premium airport taxi service with Arjun Cabs!


Spread the love

LEAVE A REPLY

Please enter your comment!
Please enter your name here