ಗುಂಡು ಹಾರಿಸಿದರೂ ಗಣೇಶೋತ್ಸವ ಅದ್ದೂರಿ ಆಚರಣೆ ಮಾಡಿಯೇ ಮಾಡ್ತೀವಿ

0
Spread the love

ವಿಜಯಸಾಕ್ಷಿ ಸುದ್ದಿ, ವಿಜಯಪುರ

Advertisement

ಗಣೇಶೋತ್ಸವ ಅದ್ದೂರಿಯಾಗಿ ಆಚರಿಸುತ್ತೇವೆ. ಬಾಳ ಅಂದ್ರ ನನಗೆ ಗುಂಡು ಹಾಕಬಹುದು, ನಾ ಸತ್ತರೂ ಹೆಸರು ತಗೊಂಡ ಸಾಯಬೇಕು, ತೊಂದರೆ ಮಾಡಬ್ಯಾಡ್ರಿ ಅಂತ ಸಿಎಂಗೂ ಹೇಳಿದ್ದೇನೆ. ಇಂತಹ ಗೊಳ್ಳ ಕಾಯಿದೆಗಳಿಗೆ ನಾವೇನು ಕೇಳಲ್ಲ‌ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.

ಜಿಲ್ಲಾಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಹಬ್ಬಕ್ಕೆ ರಿಸ್ಟಿಂಕ್ಷನ್ ಹಾಕಿದ್ದಾರೆ, ಜನ ಇಷ್ಟೇ ಸೇರಬೇಕು, ಗಣಪತಿ ಕೂಡಿಸುವಾಗ ಇಷ್ಟೇ ಜನ ಇರಬೇಕು ಮುಂತಾದ ರೂಲ್ಸ್ ಮಾಡಿದ್ದಾರೆ. ಇದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳಲ್ಲ. ಎಸ್ ಪಿ ಹಾಗೂ ಡಿಸಿ ಬರೀ ಹಿಂದೂ ಹಬ್ಬದ ಮೇಲೆ ಕಾನೂನು ಮಾಡಿದರೆ ನಾವೇನು ಕೇಳಲ್ಲ ಎಂದು ಹೇಳಿದರು.

ಗಣೆಶೋತ್ಸವಕ್ಕೆ 50 ಕಂಡಿಷನ್ ಹಾಕಿದ್ದಾರೆ. ಹತ್ತತ್ತು ಸಾವಿರ ಜನರನ್ನ ಸೇರಿಸಿ ಸಭೆ ಮಾಡುತ್ತಿದ್ದೀರಾ, ಗಣಪತಿ ಬಂದಾಗ ಮಾತ್ರ ಕೊರೊನಾ ನೆನಪಾಗತ್ತಾ. ಈ ಕುರಿತು ಸಿಎಂ ಅವರೊಂದಿಗೆ ಮಾತನಾಡಿರುವೆ. ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಾರೂ ಅಂಜಬೇಡಿ ಎಂದು ಅಭಯ ನೀಡಿದರು.

ಈಗ ಪ್ರತಿದಿನ ಜಿಲ್ಲೆಯಲ್ಲಿ ಒಂದೇ ಪಾಸಿಟಿವ್ ಬರುತ್ತಿದೆ. ಆದರೂ ವೀಕೆಂಡ್ ಕರ್ಪೂ ಹಾಕಿದ್ದಾರೆ. ಕೊರೊನಾ ಏನು ಶನಿವಾರ, ರವಿವಾರ ಅಷ್ಟೇ ಬರುತ್ತಾ ಎಂದು ಪ್ರಶ್ನಿಸಿದ ಅವರು, ಎಕ್ಸಪರ್ಟ್ ಗಳು ಯಾವ ಆಧರಾದ ಮೇಲೆ ಮಾಹಿತಿ ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲ, ನಮ್ಮ ಜನ ಮಾಸ್ಕ್ ಹಾಕೊಳ್ಳದೇ ಓಡಾಡುತ್ತಾರೆ. ಏನೂ ಆಗ್ತಿಲ್ಲ ಎಂದರು.

ನಮ್ಮ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಅಧಿಕಾರಿಗಳು, ವೈದ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲೇ ವಿಜಯಪುರ ನಗರ ವ್ಯಾಕ್ಸಿನೇಷನ್‌ ನಲ್ಲಿ ನಂಬರ್ ಒನ್ ಇದೆ, ಮೂರನೇ ಅಲೆಯ ಪರಿಣಾಮ ಜಿಲ್ಲೆಯ ಮೇಲೆ ಬೀರಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.


Spread the love

LEAVE A REPLY

Please enter your comment!
Please enter your name here