ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಮನವಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಬದಲಾಗಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಗೊಲ್ಲ ಸಮಾಜದಿಂದ ಇಲ್ಲಿನ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ನೀಡಲಾಯಿತು.
ಸಮಾಜದ ಅಧ್ಯಕ್ಷ ಪಿ.ಎಫ್.ಗೌಡರ ಮಾತನಾಡಿ, ಕಾಡುಗೊಲ್ಲ ಎನ್ನುವುದು ಗೊಲ್ಲ ಸಮಾಜದ ಒಂದು ಉಪ ಪಂಗಡವಾಗಿದೆ. ಕಾಡುಗೊಲ್ಲ ಪಂಗಡಕ್ಕೆ ಮಾತ್ರ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸರಿಯಾದ ಕ್ರಮವಲ್ಲ. ಆದರೆ ಸರ್ಕಾರವು ಇತ್ತೀಚೆಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಸ್ಥಾಪನೆಯಿಂದ ಕೇವಲ ರಾಜ್ಯದ ಕೇವಲ 2 ಜಿಲ್ಲೆಗಳಿಗೆ ಹೆಚ್ವು ಉಪಯುಕ್ತ ಹಾಗೂ ಲಾಭ ಆಗಲಿದೆ. ಪರಿಣಾಮ ಅಂದಾಜು 35 ರಿಂದ 40 ಲಕ್ಷ ಜನಸಂಖ್ಯೆ ಹಾಗೂ 24 ಉಪ ಪಂಗಡಗಳಿಗೆ ಅನ್ಯಾಯವಾಗಲಿದೆ ಎಂದು ದೂರಿದರು.
ರಾಜ್ಯದ ಸಮಗ್ರ ಗೊಲ್ಲ ಸಮುದಾಯದ ಎಲ್ಲ ಪಂಗಡಗಳನ್ನು ಒಳಗೊಂಡಂತ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುವ ಮೂಲಕ ಬಡ ಹಾಗೂ ಹಿಂದುಳಿದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕಿನ ಕಾಲಕಾಲೇಶ್ವರ, ಮ್ಯಾಕಲ್‌ಝರಿ, ಜಕ್ಕಲಿ, ಯರೆಬೇಲೆರಿ, ಡಸ ಹಡಗಲಿ ಹಾಗೂ ಕುರಹಟ್ಟಿ ಗ್ರಾಮಗಳಿಂದ ಗ್ರಾಮಸ್ಥರು ಭಾಗವಹಿಸಿದ್ದರು.
ಪುರಸಭೆ ಮಾಜಿ ಸದಸ್ಯ ಕಳಕಪ್ಪ ಗುಳೇದ, ಎಚ್.ವೈ.ಬೊನೇರ, ಪಿ.ವೈ.ಮ್ಯಾಗೇರಿ, ಶರಣಪ್ಪ ದಿವಾಣದ, ನಾಗಪ್ಪ ಮ್ಯಾಗೇರಿ, ದೇವಪ್ಪ ವರಗಾ, ಮುತ್ತು ಗೌಡರ, ಮುದಕಪ್ಪ ಬೊನೇರ, ಮಲ್ಲನಗೌಡ ಗೌಡರ, ಬಾಲಪ್ಪ ಗೌಡರ, ಯಲ್ಪಪ್ಪ ಮ್ಯಾಗೇರಿ, ಮುತ್ತು ದಿವಾಣದ, ದೇವಪ್ಪ ಗುಳೇದ, ಶ್ರೀಧರ ದಿವಾಣದ, ಕಳಕಪ್ಪ ದಿವಾಣದ, ಮುತ್ತಣ್ಣ ವರಗಾ, ಕಳಕಪ್ಪ ಕುರಿ, ಸಂತೋಷ ದಿವಾಣದ, ಮಂಜುನಾಥ ವರಗಾ ಸೇರಿ ಇತರರು ಇದ್ದರು.

Advertisement

Spread the love

LEAVE A REPLY

Please enter your comment!
Please enter your name here