Homekoppalಚಳವಳಿಗೆ ಸಾರ್ವಜನಿಕರು ಸಹಕರಿಸಲು ಮನವಿ

ಚಳವಳಿಗೆ ಸಾರ್ವಜನಿಕರು ಸಹಕರಿಸಲು ಮನವಿ

For Dai;y Updates Join Our whatsapp Group

Spread the love

-ಫೆ.11ರಂದು ಕೊಪ್ಪಳ ಬಂದ್‌

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ಅಂಬೇಡ್ಕರ್ ಪೋಟೋ ತೆಗಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ನಡೆ ಖಂಡಿಸಿ ಫೆಬ್ರವರಿ 11ರಂದು ಕೊಪ್ಪಳ ಬಂದ್‌ಗೆ
ಸಂವಿಧಾನ ಉಳಿಸಿ ಅಂದೋಲನ ಸಮಿತಿ ಹಾಗೂ ಇತರ ಜನಪರ ಸಂಘಟನೆಗಳು ಕರೆ ನೀಡಿದ್ದು ಸಾರ್ವಜನಿಕರು ಈ ಚಳವಳಿಗೆ ಸಹಕರಿಸಬೇಕು ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮನವಿ ಮಾಡಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಮಾಡಿದ ಈ ಅಪಮಾನ ವಿರುದ್ಧ ಕೊಪ್ಪಳ ಬಂದ್ ಹೋರಾಟಕ್ಕೆ ಕರೆ ನೀಡಲಾಗಿದ್ದು, ‘ ಗಾಂಧಿ ‘ ಹಾಗೂ ಅಂಬೇಡ್ಕರ್ ಫೋಟೋ ಇರಿಸಬೇಕೆಂಬುದು ಸಾಮಾನ್ಯ ತಿಳಿವಳಿಕೆ. ಹೀಗೆ ಇದ್ದಾಗ್ಯೂ , ಅಂಬೇಡ್ಕರವರಿಗೆ ಅವಮಾನ ಮಾಡುವಂತೆ ನ್ಯಾಯಾಧೀಶರ ನಡೆದುಕೊಂಡ ವರ್ತನೆಯ ವಿರುದ್ಧ ಈಗಾಗಲೇ ಎಲ್ಲ ಕಡೆಗೂ ಪ್ರತಿಭಟನೆ ನಡೆದಿವೆ. ನ್ಯಾಯದಾನ ನೀಡಬೇಕಾದ ಸ್ಥಾನದಲ್ಲಿ ಕುಳಿತಿರುವ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಇವರ ವರ್ತನೆಯು ಈಗಾಗಲೇ ಜಾತೀವಾದ – ಕೋಮುವಾದಗಳ ಸಂಘರ್ಷದಲ್ಲಿ ಬೇಯುತ್ತಿರುವ ನಮ್ಮ ಸಮಾಜದಲ್ಲಿ ಮತ್ತಷ್ಟು ಧಗೆಯನ್ನು ಹುಟ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನ್ಯಾಯಾಧೀಶರ ಈ ನಡೆಯು ಅವರ ಉದ್ದೇಶವನ್ನು ಪ್ರಶ್ನಾರ್ಹವನ್ನಾಗಿಸುತ್ತದೆ . ಇಂತಹ ವಿವಾದಗಳು ಜನರ ಗಮನವನ್ನು ಅವರ ಮೂಲಭೂತ ಸಮಸ್ಯೆಗಳಿಂದ ದಿಕ್ಕು ತಪ್ಪಿಸುತ್ತವೆ ಎಂಬುದನ್ನು ವಿವೇಚನಾರಹಿತರಾಗುವುದು ಸಾಧ್ಯವೇ ? ಎಂಬ ಪ್ರಶ್ನೆ ಎಲ್ಲಾ ಪ್ರಜ್ಞಾವಂತರನ್ನೂ ಕಾಡುತ್ತಿದೆ . ಘಟನೆ ಅರಿಯದಷ್ಟು ನಡೆದು ಇಷ್ಟು ದಿನ ಕಳೆದರೂ ಕರ್ನಾಟಕದ ಮುಖ್ಯಮಂತ್ರಿಗಳಾಗಲಿ , ಹೈಕೋರ್ಟ ಮುಖ್ಯ ನ್ಯಾಯಾಧೀಶರಾಗಲಿ , ಕಾನೂನು ಸಚಿವರಾಗಲಿ , ಗೃಹ ಸಚಿವರಾಗಲಿ ಈ ಕುರಿತು ಮೌನ ವಹಿಸಿರುವುದು ವಿಷಾದದ ಸಂಗತಿ ಎಂದರು.

ಫೆ.11ರಂದು ಈ ವಿಷಯ ಖಂಡಿಸಿ ಕೊಪ್ಪಳ ಬಂದ್ ಹೋರಾಟ ಅಂಬೇಡ್ಕರ್‌ ಸರ್ಕಲ್‌ದಿಂದ ಮೆರವಣಿಗೆ ಪ್ರಾರಂಭವಾಗಿ ಗಡಿಯಾರ ಕಂಬ , ಅಶೋಕ್ ಸರ್ಕಲ್ ಮೂಲಕ ಗಂಜ್ ಸರ್ಕಲ್ ನಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿ , ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಮುಕ್ತಾಯಗೊಳಿಸಲಾಗುವುದು. ಅಂದಿನ ಆ ಹೋರಾಟಕ್ಕೆ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಪಾಲ್ಗೊಳ್ಳುವುದರ ಮೂಲಕ ಕೊಪ್ಪಳ ಬಂದ್ ಚಳುವಳಿಯನ್ನು ಯಶಸ್ವಿಗೊಳಿಸಬೇಕೆಂದು ಸಂವಿಧಾನ ಸಂಘಟನೆಗಳು , ವಿದ್ಯಾರ್ಥಿ ಸಂಘಟನೆಗಳು , ಸಮಸ್ತ ಜನತೆ ಉಳಿಸಿ ಆಂದೋಲನ ಸಮಿತಿಯು ಕೊಪ್ಪಳ ವಿನಂತಿಸಿಕೊಳ್ಳುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗಾಳೆಪ್ಪ ಕಡೆಮನಿ, ಬಸವ ಕೇಂದ್ರದ ರಾಜು ಶಶಿಮಠ ಚಲುವಾದಿ ಸಮಾಜ ಮುಖಂಡ ಸಿದ್ಧಪ್ಪ ಹೊಸಮನಿ, ವಾಲ್ಮೀಕಿ ಸಮಾಜದ ಮುಖಂಡ
ರಾಮಣ್ಣ ಕಲ್ಲಣ್ಣನವರ್, ಹಾಲುಮತ ಸಮಾಜದ ಹನುಮಂತಪ್ಪ ಕೌದಿ, ಯಲ್ಲಪ್ಪ ಕಲ್ಲಣೆದೇವರ, ಲೋಕೇಶ್ ಭಜಂತ್ರಿ, ಯಂಕನಗೌಡ ಹೊರತಟ್ನಾಳ, ಶಂಕರ ನಾಯಕ, ಗೈಬುಸಾಬ ಚಟ್ಟಿ ಎ.ವಿ. ಕಣವಿ, ಈಶಣ್ಣ ಕೊರ್ಲಹಳ್ಳಿ, ಪರಶುರಾಮ, ಯಲ್ಲಪ್ಪ ಬಳಗನೂರು, ನಾಗರಾಜ, ಬಾಲಚಂದ್ರ, ಈರಣ್ಣ ಹುಣಸಿನ ಮರ, ಸಂಗಮೇಶ ಬಾದವಾಡಗಿ, ರಮೇಶ ಹಡಪದ್ ಮತ್ತಿತರರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!