ಜಾಗದ ಸಮಸ್ಯೆ – ಎರಡು ಕುಟಂಬಗಳ ನಡುವೆ ಮಾರಾಮಾರಿ

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು, ಒಂದು ಗುಂಪಿನ ಮೂವರು ಹಾಗೂ ಇನ್ನೊಂದು ಗುಂಪಿನ ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಆದರೆ,ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಈ ಗುಂಪುಗಳ ನಡುವೆ ಆಗಾಗ ಜಾಗದ ಕುರಿತು ತಕರಾರು ನಡೆಯುತ್ತಿತ್ತು. ಆದರೆ ಇಂದು ಇದೇ ಕಾರಣಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಗಬ್ಬೂರು ಬೈಪಾಸ್ ಬಳಿಯ ಹತ್ತಿರವಿರುವ ಆಟೋಮೊಬೈಲ್ ಹಿಂದಿನ ಜಾಗವೇ ಕಲಹದ ಮೂಲ ಕಾರಣ ಎನ್ನುತ್ತಾರೆ ಸ್ಥಳೀಯರು.

ಸೋಮವಾರ ಮತ್ತೆ ಇದೆ ವಿಚಾರ ವಿಕೋಪಕ್ಕೆ ಹೋಗಿ ವಾಗ್ವಾದ ನಡೆದು ಮಾರಣಾಂತಿಕವಾಗಿ ಹೊಡೆದಾಡಿಕೊಂಡ ಘಟನೆ ನಡೆದಿದೆ.

ಪಾಲಿಕೆಯ ಮಾಜಿ ಸದಸ್ಯ ಬಸೀರ ಅಹ್ಮದ್ ಗುಡ್ಮಾಲ್ ಕುಟುಂಬ ಹಾಗೂ ಆಸೀಪ್ ದಡವಾಡ್ ಕುಟುಂಬದ ಮಧ್ಯೆ ಜಾಗೆಯ ಬಗ್ಗೆ ಇರುವ ಹಳೆ ವೈಷಮ್ಯ ಹೊಗೆಯಾಡುತ್ತಿದೆ. ಇಂದು ಇದೇ ವಿಚಾರ ವಿಕೋಪಕ್ಕೆ ತಿರುಗಿ ಎರಡು ಗುಂಪಿನ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆಸೀಪ್ ದಡವಾಡ್, ಇರ್ಫಾನ್, ಸಾಬೀರ್ ಹಾಗೂ ಅವರ ಸಹಚರರು, ರಿಯಾಜ್ ಆಹ್ಮದ್ ಗುಡ್ಮಾಲ್, ಶಬ್ಬೀರ್ ಅಹ್ಮದ್ ಗುಡ್ಮಾಲ್ ಎಂಬುವವರ ಮಧ್ಯೆಯೇ ಹೊಡೆದಾಟ ನಡೆದಿದೆ. ಈ ಸಂದರ್ಭದಲ್ಲಿಯೇ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ.

ಈ ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬಸೀರ್ ಗುಡ್ಮಾಲ್ ಅವರು, ಸಮಾಜ ಸೇವೆಗೆ ಎಂದೇ ಬಳಕೆಯಾಗುತ್ತಿದ್ದ ಆಂಬುಲೇನ್ಸ್ ಸಮೇತ ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಗುಡ್ಮಾಲ್ ಕುಟುಂಬದವರು ಅಂಬುಲೇನ್ಸ್ ನಲ್ಲಿ ಮಾರಕಾಸ್ತ್ರಗಳನ್ನು ತುಂಬಿಕೊಂಡು ಬಂದು ನಮ್ಮ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಡವಾಡ್ ಪರಿವಾರದವರು ಆರೋಪಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕಸಬಾ ಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here