ವಿಜಯಸಾಕ್ಷಿ ಸುದ್ದಿ, ಗದಗ
ನಾವು ಮುಂಬೈನಿಂದ ರಿಲಾಯನ್ಸ್ ಗ್ರೂಪ್ ನಿಂದ ಮಾತಾಡ್ತಾ ಇರೋದು…..ನಿಮ್ಮ ಪ್ಲಾಟ್ ನಲ್ಲಿ ರಿಲಾಯನ್ಸ್ ಜಿಯೋ ಟವರ್ ಹಾಕ್ತೀವಿ. ನಿಮಗೆ 60 ಲಕ್ಷ ರೂಪಾಯಿ ಹಣ ಕಂಪನಿಯಿಂದ ಕೊಡ್ತೀವಿ….ಹೀಗಂತ ಮೊಬೈಲ್ ಕರೆ ಮಾಡಿದ ಇಬ್ಬರು ಖದೀಮರು ಕಾರ್ಪೆಂಟರ್ ಒಬ್ಬನಿಂದ ಲಕ್ಷಾಂತರ ರೂ, ಹಣ ದೋಚಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ.
ಅಬ್ಬಿಗೇರಿ ಗ್ರಾಮದ ಕಾರ್ಪೆಂಟರ್ ಮುತ್ತಪ್ಪ ಮಾರುತೆಪ್ಪ ಬಂಡಿವಡ್ಡರ ಎಂಬುವವರು ಮೋಸಕ್ಕೊಳಗಾಗಿ ದುಡ್ಡು ಕಳೆದುಕೊಂಡವರು.
ಮುಂಬೈ ರಿಲಾಯನ್ಸ್ ಕಂಪನಿಯ ಹೆಸರಿನಲ್ಲಿ ರಾಜಾರಾಮ್ ಹಾಗೂ ಸೋಮಶೇಖರ್ ಎಂಬುವವರು ಮಾರ್ಚ್ 30 ರಿಂದ ಏಪ್ರಿಲ್ 15 ರವರೆಗೆ ಹಂತಹಂತವಾಗಿ 2ಲಕ್ಷ, 20 ಸಾವಿರಕ್ಕೂ ಹೆಚ್ಚು ಹಣವನ್ನು ತಮ್ಮ ಅಕೌಂಟ್ ನಂಬರಿಗೆ ಹಾಕಿಸಿಕೊಂಡು ಜಿಯೋ ಮೊಬೈಲ್ ಟವರ್ ಹಾಕದೇ ಮೋಸ ಮಾಡಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ಮೋಸ ಹೋದ ಮುತ್ತಪ್ಪ ದೂರು ನೀಡಿದ್ದಾರೆ.