ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:
ಪಟ್ಟಣದ ಚಹಾ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ಇಸ್ಪೀಟ್ ಆಟ ಆಡುತ್ತಿದ್ದವರಲ್ಲಿ ಐವರನ್ನು ಪೊಲೀಸರು ಬಂಧಿಸಿದ ಘಟನೆ ಶಿರಹಟ್ಟಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸ್ ದಾಳಿಯ ಸಮಯದಲ್ಲಿ ಇನ್ನೂ ಕೆಲವರು ತಪ್ಪಿಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆಂದು ತಿಳಿದು ಬಂದಿದೆ.
ಕುಬೇರ ಶಂಕ್ರಪ್ಪ ಲಮಾಣಿ, ಉಮೇಶ ಹನುಮಂತಪ್ಪ ಲಮಾಣಿ, ಮಾನಪ್ಪ ಡಾಕಪ್ಪ ಲಮಾಣಿ, ಮುತ್ತಪ್ಪ ಠಾಕರೆಪ್ಪ ಲಮಾಣಿ, ಪ್ರದೀಪ ಮರಿಯಪ್ಪ ಬೂದಿಹಾಳ ಬಂಧಿತರು. ಬಂಧಿತರು 7850 ರೂ. ಹಣವನ್ನು ಪಣಕ್ಕೆ ಕಟ್ಟಿ ಆಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



