ಡಿಸಿಎಂ ಲಕ್ಷ್ಣ ಸವದಿ ಅವರ ಸಹೋದರನ ಮಗ ಸೋಂಕಿಗೆ ಬಲಿ!

0
Spread the love

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

Advertisement

ರಾಜ್ಯದಲ್ಲಿ ಮಹಾಮಾರಿ ತಾಂಡವಾಡುತ್ತಿದ್ದು, ಪ್ರತಿ ದಿನ ಅನೇಕ ಜನರು ಬಲಿಯಾಗುತ್ತಿದ್ದಾರೆ. ಸದ್ಯ ಡಿಸಿಎಂ ಲಕ್ಷ್ಮಣ್ ಸವದಿ ಅವರ ಅಣ್ಣನ ಮಗ ಕೂಡ ಮಾಹಾಮಾರಿಗೆ ಬಲಿಯಾಗಿದ್ದಾರೆ.
ವಿನೋದ ಪರಪ್ಪ ಸವದಿ(36) ಮಹಾಮಾರಿಗೆ ಬಲಿಯಾದ ದುರ್ದೈವಿ. ಇವರು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿರುವ ಪರಪ್ಪ ಸವದಿ ಅವರ ಪುತ್ರರಾಗಿದ್ದಾರೆ. ಸದ್ಯ ಇವರು ಪುತ್ರನ ವಿಯೋಗದಿಂದ ಸಂಕಟ ಪಡುತ್ತಿದ್ದಾರೆ.

ಕೊರೊನಾ ಅಂಟಿಕೊಂಡ ಹಿನ್ನೆಲೆಯಲ್ಲಿ ವಿನೋದ ಅವರು ಕಳೆದ ಒಂದು ವಾರದಿಂದ ಅಥಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.


Spread the love

LEAVE A REPLY

Please enter your comment!
Please enter your name here