ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಯಾರು?

0
Spread the love

 ವಿಜಯಸಾಕ್ಷಿ ಸುದ್ದಿ, ನವಲಗುಂದ:

Advertisement

ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರು ಬದಲಾಗಿ ಮೂರು ತಿಂಗಳೇ ಗತಿಸಿದ್ದರೂ ಇಲ್ಲಿಯ ತಾಲ್ಲೂಕಾ ಪಂಚಾಯತಿ ಆವರಣದಲ್ಲಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಜನ ಸಂಪರ್ಕ ಕಾರ್ಯಾಲಯದ ನಾಮಪಲಕದಲ್ಲಿ ಬದಲಾವಣೆಯಾಗದಿರುವುದು ಕಾರ್ಯಾಲಯಕ್ಕೆ ಬರುವ ಜನ ಸಾಮಾನ್ಯರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಜನೇವರಿ 24 ರಂದೇ ಬದಲಾಗಿ ರಾಯಚೂರ ಹಾಗೂ ಬೀದರ ಜಿಲ್ಲಾ ಉಸ್ತುವಾರಿಗಳಾಗಿದ್ದಾರೆ.

ಧಾರವಾಡ ಜಿಲ್ಲೆಗೆ ಹಾಲಪ್ಪ ಆಚಾರ್ಯ ಉಸ್ತುವಾರಿಗಳಾಗಿ ನೇಮಕವಾಗಿದ್ದಾರೆ. ಆದರೆ ಶಂಕರ ಪಾಟೀಲ ಮುನೇನಕೊಪ್ಪರ ಜನಸಂಪರ್ಕ ಕಾರ್ಯಾಲಯದ ನಾಮಫಲಕವನ್ನು ಅಪಡೆಟ್ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷವೊ? ಅಥವಾ ಸಚಿವರ ನಿರ್ಲಕ್ಷವೊ ಎಂಬುದು ಯಕ್ಷಪ್ರಶ್ನೆಯಾಗಿದ್ದು, ಆದಷ್ಟು ಬೇಗನೆ ನಾಮಫಲಕವನ್ನು ಬದಲಿಸಿ ಜನಸಾಮಾನ್ಯರಿಗಾಗುತ್ತಿರುವ ಗೊಂದಲವನ್ನು ನಿವಾರಣೆ ಮಾಡಬೇಕೆಂಬುದು ಜನಸಾಮಾನ್ಯರ ಒತ್ತಾಸೆಯಾಗಿದೆ. 


Spread the love

LEAVE A REPLY

Please enter your comment!
Please enter your name here