ನದಾಫ್ ಸಂಘದ ಅಧ್ಯಕ್ಷರ ಪತ್ನಿ ಹಬೀದಾ ಬೇಗಂ ನಿಧನ; ಅಬ್ದುಲ್ ರಜಾಕ್ ಸಂತಾಪ

0
Spread the love

ವಿಜಯಸಾಕ್ಷಿ ಸುದ್ದಿ, ನವಲಗುಂದ

Advertisement

ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘದ ಅಧ್ಯಕ್ಷ ಜನಾಬ್ ಜಲೀಲ್ ಸಾಹೇಬ್ ಅವರ ಧರ್ಮಪತ್ನಿ ಹಬೀದಾ ಬೇಗಂ ಅವರ ನಿಧನಕ್ಕೆ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ತೀವ್ರ ಸಂತಾಪ ಸೂಚಿಸಿದೆ.

ಮರ್ಹೂಮಾ ಹಬೀದಾ ಬೇಗಂ ರವರಿಗೆ ಆ ಅಲ್ಹಾನು ಮೃತರ ಅತ್ಮಕ್ಕೆ ಶಾಂತಿ (ಮಘ್ಪಿರತ್) ದಯಪಾಲಿಸಲಿ ಎಂದ ಅಬ್ದುಲ್ ರಜಾಕ್ ನದಾಫ್, ಹುಜೂರ್ ಮೋಹ್ಮದ್ ಮುಸ್ತಫಾ (ಸ್ವ) ಇವರ ನೆರವಾಗಲಿ ಎಂದು ಆಶಿಸಿದ್ದಾರೆ.

ಪಿಂಜಾರ್ ನದಾಫ್ ಸಮಾಜ ಮುಂಚೂಣಿಯಲ್ಲಿ ನಿಂತು ಜನ ಪರ ಧ್ವನಿಯಾಗಿ ಹೋರಾಡುತ್ತಿದ್ದ ಇವರ ನಿಧನವು ಸಮುದಾಯದಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಹಬೀದಾ ಬೇಗಂ ಅವರಿಗೆ ಸ್ವರ್ಗಪ್ರಾಪ್ತಿ ಮತ್ತು ಅವರ ಕುಟುಂಬದರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಅಲ್ಲ್ಹಾತಾಲ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here