ನಾಟಕ ವಿಮರ್ಶೆ… ಧನದಾಹಿಯನ್ನ ದಾರಿಗೆ ತರುವ ದೇವತೆ

0
Spread the love

ಹೆಂಡತಿನ ಕೇಳಿ ಮದುವೆಯಾಗು ಎಂಬ ಫ್ಯಾಮಿಲಿ ಡ್ರಾಮಾ

Advertisement

ಸೀಟಿಗೆ ನಂಬರ್, ಸೀನ್‌ಗಳಿಗೆ ಟೆಕ್ನಿಕಲ್ ಟಚ್

-ಬಸವರಾಜ ಕರುಗಲ್.


ಕೊಪ್ಪಳದಲ್ಲಿ ನಾಟಕಗಳ ಕಲರವ ಹೊಸತೇನಲ್ಲ. ಆಗಾಗ ಕಂಪನಿ ನಾಟಕಗಳು ಬಿಡಾರ ಹೂಡುತ್ತಾ ಬಂದಿವೆ. ಈಗ ಬಂದಿರೊ ಕೆಬಿಆರ್ ನಾಟಕ ಕಂಪನಿ ಕೊಪ್ಪಳದ ಮಟ್ಟಿಗೆ ಹೊಸ ಪ್ರಯೋಗ ಮಾಡುತ್ತಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಇದುವರೆಗೂ ಕಂಪನಿಯಲ್ಲಿ ಆಸನಗಳಿಗೆ ನಂಬರ್ ವ್ಯವಸ್ಥೆ ಇರಲಿಲ್ಲ. ಈ ಕಂಪನಿ ಸೀಟುಗಳಿಗೆ ನಂಬರ್ ನೀಡಿರುವುದರಿಂದ, ಅಂತರ ಕಾಪಾಡಿರುವುದರಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಹಿಳಾ ಪ್ರೇಕ್ಷಕರಿಗೆ ಸಂತಸದ ಸಂಗತಿ. ಜೊತೆಗೆ ನಾಟಕದ ದೃಶ್ಯಗಳಲ್ಲಿ ಹೈಟೆಕ್ ಸ್ಪರ್ಶ ನೀಡಿದ್ದು ಎಲ್ಲ ವರ್ಗದವರಿಗೂ ಮುದ ನೀಡುತ್ತದೆ. ಪಾತ್ರಧಾರಿಗಳಿಗೆಲ್ಲ ಕಾಲರ್ ಮೈಕ್ ನೀಡಿದ್ದು ಹೊಸ ಅಲೆಯ ನಾಟಕಗಳ ಜೊತೆಗಿನ ಕಂಪನಿ ನಾಟಕಗಳ ಸ್ಪರ್ಧೆ‌ ಎನ್ನುವಷ್ಟರ ಮಟ್ಟಿಗೆ ಬದಲಾವಣೆ ಕಂಡಿದೆ.

over to review…

“ನಿಮಗೆ ಸಂಪತ್ತು ಮುಖ್ಯ, ನನಗೆ ಸಂಬಂಧ ಮುಖ್ಯ” ಎನ್ನುವ ಕ್ಲೈಮ್ಯಾಕ್ಸ್ ಸೀನ್‌ನ ಡೈಲಾಗ್ ಇಡೀ ನಾಟಕ್ ತಿರುಳನ್ನು ಒತ್ತಿ ಹೇಳುತ್ತದೆ. ನಾಟಕದ ಟೈಟಲ್ “ಹೆಂಡತಿನ‌ ಕೇಳಿ ಮದುವೆಯಾಗು”- ಹೆಸರನ್ನು ಕೇಳಿದಾಕ್ಷಣ ಇದೊಂದು ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಅನಿಸುತ್ತದೆ. ಆದರೆ ಈ ನಾಟಕದಲ್ಲಿ ಕಾಮಿಡಿಯ ಜೊತೆಗೆ ಕೌಟುಂಬಿಕ ಸಂಗತಿಗಳಿಗೆ ಹೆಚ್ಚಿನ ಆದ್ಯತೆ.

3 ಗಂಟೆ 15 ನಿಮಿಷಗಳ ಇಡೀ ನಾಟಕದಲ್ಲಿ ಸುಮಾರು 16 ದೃಶ್ಯಗಳಿವೆ. ಕನಸಿನ ಮೂಲಕ ಆರಂಭಗೊಳ್ಳುವ ಮೊದಲ ದೃಶ್ಯವೇ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಜೊತೆಗೆ ಹೊಸ ಅನುಭವ ನೀಡುತ್ತದೆ.

ದುನಿಯಾದಲ್ಲಿ ದುಡ್ಡೇ ಮುಖ್ಯ ಎನ್ನುವ ಹೀರೋ ಕಮ್ ವಿಲನ್ ಅಮೃತ್ ಪರಿವರ್ತನೆಗೊಳ್ಳುವ ಚಿಂದೋಡಿ ವಿಜಯ್ ಅವರ ಕಥೆಗೆ ಪೂರಕವಾಗಿ ಶಿವಶಂಕರ್ ಬ್ಯಾಳಿ ಸಂಭಾಷಣೆ ಜೋಡಿಸಿದ್ದಾರೆ.‌ ವರದಕ್ಷಿಣೆ ಹೆಚ್ಚು ಸಿಗುವ ಹುಡುಗಿಯನ್ನೇ ಮದುವೆ ಆಗಬೇಕೆನ್ನುವ ಹಂಬಲದ ಯುವಕನಿಗೆ ಲಕ್ಷಾಧಿಪತಿಯ ಮಗಳು ಐಸಿರಿ ಜೊತೆಗೆ ಮದುವೆಯಾಗುತ್ತೆ. ಎಲ್ಲವೂ ಸರಿ ಇರುವಾಗ ಕೋಟ್ಯಧೀಶ್ವರಿ ಯುವತಿಗೆ ವರ ಬೇಕೆನ್ನುವ ವಿಚಾರ ತಿಳಿದ ಧನದಾಹಿ ಯುವಕ ಹೆಂಡತಿಗೆ ವಿಚ್ಛೇಧನ ಕೊಡಲು ಸಿದ್ಧನಾಗ್ತಾನೆ. ಕೋರ್ಟ್‌ನಲ್ಲೂ ಈ ಬಗ್ಗೆ ವಿಚಾರಣೆ ನಡೆಯುತ್ತೆ. ಕೊನೆಗೆ ಅಮೃತ್-ಐಸಿರಿ ಮದುವೆಗೆ ವಿಚ್ಛೇದನ ಸಿಗುತ್ತಾ? ವಿಚ್ಛೇದನಕ್ಕೆ ಒಪ್ಪುವ ಐಸಿರಿಯ ಕರಾರುಗಳೇನು? ಎಂಬುದನ್ನು ನಾಟಕ‌ ನೋಡಿಯೇ ಅನುಭವಿಸಬೇಕು.

ಅಬ್ದುಲ್-ಸುಂದ್ರಿ-ಗಡಿಗೆಪ್ಪ ಪಾತ್ರಧಾರಿಗಳ ಕಾಮಿಡಿ ಟ್ರ್ಯಾಕ್ ಪ್ರೇಕ್ಷಕರನ್ನು ಮತ್ತೊಂದು ಮಗ್ಗುಲಿಗೆ ಒಯ್ಯುತ್ತದೆ.

ಇಂಗ್ಲಿಷ್ ಸಂಭಾಷಣೆ ಹೇಳುವಾಗ ದೃಶ್ಯವೊಂದರಲ್ಲಿ ಅವಳನ್ನು ಮುಟ್ಟಬೇಡ ಎನ್ನಲು don’t touch me ಎಂದು ನಾಯಕಿ ಹೇಳ್ತಾಳೆ. ಅದು don’t touch her ಎಂದಾಗಬೇಕಿತ್ತು. ಜೊತೆಗೆ ಕಾಮಿಡಿ ಸೀನ್‌ಗಳಲ್ಲಿ ಒಂದೆರಡು ಕಡೆ ತಂಬಿಗೆ ಜೋಕ್ಸ್ ಒಂಚೂರು ಮುಜುಗರ ಅನ್ಸುತ್ತೆ. ಆದರೆ ತೀರಾ ಅಸಹ್ಯ ಏನಿಲ್ಲ.

ಇದು ರಾದ್ಧಾಂತ ಅಲ್ಲ, ಸಿದ್ಧಾಂತ, ಗಂಡ ಅಲ್ಲ, ಮಗು ಅಂತ ಭಾವಸ್ತಿನಿ, ಸಾವಿಗೂ ಮಂತ್ರ ಇದೆ, ವಿಚ್ಛೇದನಕ್ಕಿಲ್ಲ, ಜಗತ್ತು ಜಾಗೃತವಾಗಲಿ ಅಂತಾನೇ ಈ ಜಾಹೀರಾತು ಎಂಬಂಥ ಗಟ್ಟಿ ಮಾತುಗಳು ನಾಟಕದ ತೂಕ ಹೆಚ್ಚಿಸಿವೆ. ಒಟ್ಟಾರೆ ಇಡೀ ಫ್ಯಾಮಿಲಿ ಮುಜುಗರವಿಲ್ಲದೇ ನಾಟಕವನ್ನು ಸವಿಯಬಹುದು.


Spread the love

LEAVE A REPLY

Please enter your comment!
Please enter your name here