ನಾನು ತಪ್ಪು ಮಾಡಿದ್ದರೆ ಕಪಾಳಕ್ಕೆ ಹೊಡೆಯಿರಿ

0
Spread the love

ವಿಜಯಸಾಕ್ಷಿ ಸುದ್ದಿ, ಯಾದಗಿರಿ

Advertisement

ನಾನು ತಪ್ಪು ಮಾಡಿದ್ದರೆ ನಿಮ್ಮ ಅಣ್ಣ ತಪ್ಪು ಮಾಡಿದ್ದಾನೆ ಎಂದು ಕಪಾಳಕ್ಕೆ ಹೊಡೆಯಿರಿ. ನನ್ನಂತವರು ಹಿಂದು ಸಿಗಲ್ಲ. ಮುಂದೆಯೂ ಸಿಗಲ್ಲ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಭಾವುಕರಾಗಿ ನುಡಿದರು.

ಜಿಲ್ಲೆಯ ಗುರುಮಠಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಬಟ್ಟೆ ಕೂಡ ಅವಶ್ಯವಿಲ್ಲ. ನಾನು ಬಟ್ಟೆ ಧರಿಸದೆ ಬಿಟ್ಟು ಬಿಡಬಹುದು. ಆದರೆ ಬಟ್ಟೆ ಹಾಕಿಕೊಳ್ಳದಿದ್ದರೆ ಜನರು ಹುಚ್ಚ ಎನ್ನತ್ತಾರೆ. ಅದಕ್ಕಾಗಿ ನಾನು ಬಟ್ಟೆ ಹಾಕಿಕೊಳ್ಳುತ್ತೇನೆ ಎಂದು ಚಿಂಚನಸೂರು ಹೇಳಿದರು.

ಬಾಬುರಾವ್ ಚಿಂಚನಸೂರು ಬೇರೆ ಅಲ್ಲ, ನಾನು ನಿಮ್ಮವನೇ ನಿಮ್ಮ ಸೇವೆ ಮಾಡುತ್ತೇನೆ, ಎಲ್ಲಾ ಜಯಂತಿಗೂ ಸಹಾಯ ಮಾಡಿದ್ದೇನೆ. ಆದರೂ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದಿರಿ ಎಂದು ಚಿಂಚನಸೂರು ನೋವು ತೋಡಿಕೊಂಡರು.

ಬಟ್ಟೆ ಹಾಕೊಳ್ಳದಿದ್ರೆ ಹುಚ್ಚ ಅನ್ತಾರೆ ಅದಕ್ಕೆ ಬಟ್ಟೆ ಹಾಕೊಳ್ತೇನೆ
-ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಬುರಾವ್ ಚಿಂಚನಸೂರ ಬೇಸರದ ನುಡಿ
ವಿಜಯಸಾಕ್ಷಿ ಸುದ್ದಿ ಯಾದಗಿರಿ
ನನಗೆ ಬಟ್ಟೆ ಕೂಡ ಅವಶ್ಯವಿಲ್ಲ. ನಾನು ಬಟ್ಟೆ ಧರಿಸದೆ ಬಿಟ್ಟು ಬಿಡಬಹುದು. ಆದರೆ ಬಟ್ಟೆ ಹಾಕಿಕೊಳ್ಳದಿದ್ದರೆ ಜನರು ಹುಚ್ಚ ಎನ್ನುತ್ತಾರೆ ಅದಕ್ಕೆ ಬಟ್ಟೆ ಹಾಕಿಕೊಳ್ಳುತ್ತೇನೆ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಭಾವುಕರಾಗಿ ನುಡಿದರು.
ಗುರುಮಠಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರು ಬೇರೆ ಅಲ್ಲ, ನಾನು ನಿಮ್ಮವನು. ನಾನು ನಿಮ್ಮ ಸೇವೆ ಮಾಡುತ್ತೇನೆ. ನಾನು ಎಲ್ಲಾ ಜಯಂತಿಗೆ ಸಹಾಯ ಮಾಡಿದ್ದೇನೆ. ಆದರೂ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದಿರಿ. ನಾನು ತಪ್ಪು ಮಾಡಿದರೆ ನಿಮ್ಮ ಅಣ್ಣ ತಪ್ಪು ಮಾಡಿದ್ದಾನೆಂದು ಕಪಾಳಕ್ಕೆ ಹೊಡೆಯಿರಿ. ನನ್ನಂತವರು ಹಿಂದು ಸಿಗಲ್ಲ ಮುಂದೆಯೂ ಸಿಗಲ್ಲ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here