ಪಕ್ಷೇತರ ಅಭ್ಯರ್ಥಿ ಬೆಂಬಲ; ಕೊನೆ ಘಳಿಗೆಯಲ್ಲಿ ಸ್ನೇಹಲತಾ ಕಿಲಕಿಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಗದಗ ಬೆಟಗೇರಿ ನಗರಸಭೆ ಚುನಾವಣೆಗೆ 20ನೇ ವಾರ್ಡ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಂಗವ್ವ ರುದ್ರಪ್ಪ ಬನ್ನಿಮರದ ಶ್ರೀರಾಮ ಸೇನೆಯ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸ್ನೇಹಲತಾ ಮುತ್ತುರಾಜ ಕುರ್ತಕೋಟಿ ಅವರನ್ನು ಬೆಂಬಲಿಸಿ ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆ.

ಇಲ್ಲಿಯ ಒಕ್ಕಲಗೇರಿಯಲ್ಲಿ ಜರುಗಿದ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ರುದ್ರಪ್ಪ ಬೇವಿನಮರದ ಅವರನ್ನು ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ಹೂ ಮಾಲೆ ಹಾಕುವ ಮೂಲಕ ಸ್ವಾಗತಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗಂಗವ್ವ ರುದ್ರಪ್ಪ ಬನ್ನಿಮರದ ಮಾತನಾಡಿ, ‘ತಾವು ಮೂಲತ: ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದು ತಮ್ಮ ಸ್ಪರ್ಧೆಯಿಂದ ಶ್ರೀರಾಮ ಸೇನೆಯ ಬೆಂಬಲಿತ ಅಭ್ಯರ್ಥಿ ಸ್ನೇಹಲತಾ ಕುರ್ತಕೋಟಿ ಅವರ ಜಯದ ಮೇಲೆ ಪರಿಣಾಮ ಬೀರಲಿದೆ. ಈ ದಿಸೆಯಲ್ಲಿ ತಾವು ಸ್ನೇಹಲತಾ ಕುರ್ತಕೋಟಿ ಅವರನ್ನು ಬೆಂಬಲಿಸಿ ಚುನಾವಣೆಯಿಂದ ನಿವೃತ್ತಿಯಾಗಿರುವದಾಗಿ ಘೋಷಿಸಿದರು.

ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ಮಾತನಾಡಿ, ‘20ನೇ ವಿಭಾಗದಲ್ಲಿ ಶ್ರೀರಾಮ ಸೇನೆಯ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸ್ನೇಹಲತಾ ಬೇವಿನಮರದ ಆಯ್ಕೆಯಾಗುವ ಎಲ್ಲ ಸ್ಪಷ್ಟ ಲಕ್ಷಣಗಳಿವೆ. ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಗಂಗವ್ವ ರುದ್ರಪ್ಪ ಬನ್ನಿಮರದ ಸ್ಪರ್ಧೆಯಿಂದ ಹಿಂದು ಪರ ಮತಗಳು ಇಬ್ಬಾಗವಾಗುವ ಲಕ್ಷಣಗಳಿದ್ದವು. ಈ ಸಂಗತಿಯನ್ನು ಮನಗಂಡು ಓಣಿಯ ಹಿರಿಯರ ಅಭಿಲಾಸೆಯಂತೆ ಪಕ್ಷೇತರ ಅಭ್ಯರ್ಥಿ ಗಂಗವ್ವ ರುದ್ರಪ್ಪ ಬನ್ನಿಮರದ ಚುನಾವಣಾ ಕಣದಿಂದ ನಿವೃತ್ತರಾಗಿ ಸ್ನೇಹಲತಾ ಕುರ್ತಕೋಟಿ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ಮಹೇಶ ರೋಖಡೆ, ಗಣೇಶ ಸತ್ಯಪ್ಪನವರ, ಶಿವಯೋಗಿ ಹಿರೇಮಠ, ಸೋಮಲಿಂಗ ಆಲೂರ, ಹುಲಿಗೆಪ್ಪ ವಾಲ್ಮೀಕಿ, ಚೇತನ ಇರಕಲ್, ಕುಮಾರ ಬನ್ನಿದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here