ವಿಜಯಸಾಕ್ಷಿ ಸುದ್ದಿ, ಗದಗ
ತನ್ನ ಪತ್ನಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಯುವಕನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆ ಗದಗ ತಾಲೂಕಿನ ಗಾವರವಾಡ ಗ್ರಾಮದಲ್ಲಿ ನಡೆದಿದೆ.
ಮಲ್ಲಯ್ಯ ಮಲ್ಲಿಕಾರ್ಜುನಯ್ಯ ಕುಮಾರಗೊಪ್ಪ ಎಂಬ ಯುವಕನೇ ಕೊಲೆ ಯತ್ನದಲ್ಲಿ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರೋಪಿ ಮಲ್ಲಪ್ಪ ಚನ್ನಪ್ಪ ಅರಳಿ ಎಂಬಾತನೇ ಕೊಲೆಗೆ ಯತ್ನಿಸಿದಾತ.
ಗಾಯಾಳು ಮಲ್ಲಯ್ಯ ಎಂದಿನಂತೆ ತನ್ನ ಮನೆಯ ಮೇಲೆ ಮಲಗಿದ್ದಾಗ ಶನಿವಾರ ಬೆಳಗಿನ ಜಾವ ಆರೋಪಿ ಮಲ್ಲಪ್ಪ ಕೊಡಲಿಯಿಂದ ಹೊಡೆದಿದ್ದಾನೆ. ಸ್ವಲ್ಪದರಲ್ಲಿ ಗಾಯಾಳು ಮಲ್ಲಯ್ಯ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



