ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಕ್ಷುಲ್ಲಕ ಕಾರಣಕ್ಕೆ ಪುಂಡರ ಗುಂಪೊಂದು ಇಬ್ಬರು ಯುವಕರ ಮೇಲೆ ಗೂಂಡಾಗಿರಿ ಮಾಡಿ ಥಳಿಸಿದ ಘಟನೆ ಸ್ಥಳೀಯ ವಿದ್ಯಾನಗರದಲ್ಲಿ ಸಂಜೆ ನಡೆದಿದೆ.
ಇಲ್ಲಿನ ಉಣಕಲ್ ಬಳಿ ಇರುವ ಶೆಲ್ ಪೆಟ್ರೋಲ್ ಬುಕ್ ನಲ್ಲಿ ಪುಂಡರು ತಮ್ಮ ಬೈಕಿಗೆ ಪೆಟ್ರೋಲ್ ಹಾಕಿಸಲು ಸರದಿ ಸಾಲಿನಲ್ಲಿ ನಿಂತಿದ್ದರು, ಆಗ ಇಬ್ಬರು ಯುವಕರು ಇರುವ ಬೈಕ್ ಈ ಪುಂಡ್ ರ ಬೈಕಿಗೆ ಟಚ್ ಆಗಿದೆ. ಹಾಗೆಯೇ ಟಚ್ ಆಗಿದ್ದೇ ತಡ ಪುಂಡರ ಕೋಪ ನೆತ್ತಿಗೇರಿ ಆ ಇಬ್ಬರೂ ಯುವಕರನ್ನು ಹಿಗ್ಗಾ-ಮುಗ್ಗಾ ಥಳಿಸಿತು.
ಬಿಡಿಸಲು ಬಂದ ಸ್ಥಳೀಯರಿಗೂ ಪುಂಡರು ಅವಾಜ್ ಹಾಕಿದರು. ಆಗ ಸ್ಥಳೀಯರು ಪುಂಡರಿಗೆ ಪ್ರತಿರೋಧ ಒಡ್ಡಿದರು. ಇದರಿಂದಾಗಿ ಪುಂಡರು ಕಾಲಿಗೆ ಬುದ್ದಿ ಹೇಳಿದರು.
ಈ ಘಟನೆಯಿಂದಾಗಿ ಪೆಟ್ರೋಲ್ ಬಂಕ್ ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಣೇಶ್ ಹಾಗೂ ನಾರಾಯಣ ಎಂಬ ಯುವಕರು ಥಳಿಸಿಕೊಂಡವರು. ಇದೇ ವೇಳೆ ಸರದಿ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರಿಗೂ ಥಳಿಸುವ ಬೆದರಿಕೆ ಹಾಕಿದ ಘಟನೆಯೂ ನಡೆಯಿತು.
ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.