ವಿಜಯಸಾಕ್ಷಿ ಸುದ್ದಿ, ಗದಗ
ಕಲ್ಲಿನ ಕ್ವಾರಿಯಲ್ಲಿ ಸ್ಫೋಟಕ ವಸ್ತುಗಳನ್ನು ಉಪಯೋಗಿಸಿ ಗಣಿಗಾರಿಕೆ ನಡೆಸುವ ಉದ್ದೇಶದಿಂದ ಅಕ್ರಮವಾಗಿ ಬೈಕ್ ಮೇಲೆ ಸಾಗಾಟ ಮಾಡುತ್ತಿದ್ದ ಮೂಲತಃ ಆಂದ್ರಪ್ರದೇಶದ ಮೋಕ್ಸಗುಂಡಮ್ಮನ ಶಿವರಡ್ಡಿ ಸುಬ್ಬಾರಡ್ಡಿ ತಮ್ಮನೇನೆ ಎಂಬಾತನನ್ನು ಶಿರಹಟ್ಟಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಪಡೆದ ಶಿರಹಟ್ಟಿ ಸಿಪಿಐ ವಿಕಾಸ ಪಿ ಲಮಾಣಿ ಹಾಗೂ ಸಿಬ್ವಂದಿಗಳು ದಾಳಿ ಮಾಡಿ ಸುಮಾರು 23 ಸಾವಿರ ರೂ, ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
102 ಜಿಲಿಟಿನ್ ಕಡ್ಡಿ, 21 ಎಲೆಕ್ಟ್ರಾನಿಕ್ ಡಿಟೊನೇಟರ್, ಬೈಕ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ.
ಚಿಕ್ಕೋಡಿಯ ವಿನಯ ಟ್ರೇಡರ್ಸ್ ನಲ್ಲಿ ಈ ಸ್ಫೋಟಕಗಳನ್ನು ಖರೀದಿ ಮಾಡಲಾಗಿದ್ದು, ವಿನಯ ಟ್ರೇಡರ್ಸ್ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



