ವಿಜಯಸಾಕ್ಷಿ ಸುದ್ದಿ, ಗದಗ
Advertisement
ಏಳು ಜನರ ತಂಡವೊಂದು ಗ್ರಾಮದ ದೇವಸ್ಥಾನ ವೊಂದರಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಬಂಧಿಸಿದ ಘಟನೆ ಜಿಲ್ಲೆಯ ಯಲಿಶಿರೂರು ಗ್ರಾಮದಲ್ಲಿ ನಡೆದಿದೆ.
ಮುಳಗುಂದ ಠಾಣೆಯ ಪಿಎಸ್ಐ ಸಚಿನ್ ಅಲಮೇಲಕರ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ ನಿಂಗಪ್ಪ ಬಸಪ್ಪ ಶಿರಹಟ್ಟಿ, ರವಿ ಮಲ್ಲಪ್ಪ ಬಾರಕೇರ, ಚಂದ್ರಶೇಖರಯ್ಯ ಬೊಗೆಶ್ವರಯ್ಯ ಜಂಗಮರ, ಬಸವರಾಜ್ ಚನ್ನಪ್ಪ ಕಳಸಾಪೂರ, ಯಲ್ಲಪ್ಪ ನಿಂಗಪ್ಪ ಹರಿಹರ, ಬಸವರಾಜ್ ರಾಮಪ್ಪ ಹಳ್ಳಿ ಹಾಗೂ ಶಂಕರಪ್ಪ ಕಲ್ಲಪ್ಪ ಹೊನ್ನಪ್ಪನವರ್ ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 3700 ರೂ.ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.