ಬಾಬಾ ರಾಮದೇವ್ ನನ್ನು ಬಂಧಿಸುವ ತಾಕತ್ತು ಯಾರಿಗೂ ಇಲ್ಲವಂತೆ!

0
Spread the love

ವಿಜಯಸಾಕ್ಷಿ ಸುದ್ದಿ, ಡೆಹ್ರಾಡೂನ್

Advertisement

ನನ್ನನ್ನು ಬಂಧಿಸುವ ತಾಕತ್ತು ಯಾರಿಗೂ ಇಲ್ಲ ಎಂದು ಬಾಬಾ ರಾಮದೇವ್ ಉಡಾಫೆ ಉತ್ತರ ನೀಡಿದ್ದಾರೆ.

ಆಲೋಪತಿ ಮೂರ್ಖತನದ ಪದ್ಧತಿ ಎಂದು ಟೀಕಿಸಿದ್ದ ಬಾಬಾ ರಾಮದೇವ್ ವಿರುದ್ಧ ಡೆಹ್ರಾಡೂನ್ ವೈದ್ಯರ ಸಂಘ ಆಕ್ರೋಶ ವ್ಯಕ್ತಪಡಿಸಿ, ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದರು. ಇದಕ್ಕೆ ಬಾಬಾರಾಮದೇವ್ ಈ ರೀತಿ ಹೇಳಿದ್ದಾರೆ.

ಸನ್ಯಾಸಿ ರಾಮದೇವ್ ಬಂಧಿಸಲು ಯಾರಿಗೂ ಸಾಧ್ಯವಿಲ್ಲ. ಅವರು ಕೇವಲ ಶಬ್ದ ಮಾಡುತ್ತಾರೆ ಅಷ್ಟೇ, ಏನಾದರೂ ಮಾಡಿಕೊಳ್ಳಲಿ ಎಂದು ರಾಮದೇವ್ ವಿಡಿಯೋದಲ್ಲಿ ಹೇಳಿದ್ದಾರೆ.

ಆಲೋಪತಿ ಚಿಕಿತ್ಸೆ ವಿರುದ್ಧದ ರಾಮದೇವ್ ಹೇಳಿಕೆಗೆ ವಿರುದ್ಧವಾಗಿ ರೂ. 1 ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ ಹೂಡಿರುವ ಐಎಂಎ, ಪ್ರಧಾನಿ ಮೋದಿಗೆ ಪತ್ರ ಬರೆದು ಬಾಬಾ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆಯೂ ಒತ್ತಾಯಿಸಿದೆ.

ಕೊರೋನಾ ಚಿಕಿತ್ಸೆಗೆ ಅಲೋಪತಿ ಚಿಕಿತ್ಸೆ ಮತ್ತು ಔಷಧಿ ಬಳಕೆಯಿಂದಾಗಿ ದೇಶದಲ್ಲಿ ಲಕ್ಷಾಂತರ ಜನ ಸಾವು ಕಂಡರು ಮತ್ತು ಕೊರೊನಾ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡ ಬಳಿಕವೂ ದೇಶದಲ್ಲಿ 10 ಸಾವಿರ ಜನ ಸಾವು ಕಂಡಿದ್ದಾರೆ ಎಂದು ಬಾಬಾ ಹೇಳಿದ್ದರು.


Spread the love

LEAVE A REPLY

Please enter your comment!
Please enter your name here