ಬಿಜೆಪಿಗೆ ವೋಟ್ ಹಾಕಿ ಹೊಟ್ಟಿ ಮ್ಯಾಗ್ ತಣ್ಣೀರ ಬಟ್ಟಿ ಹಾಕೊಳದಾಗೈತ್ರಿ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಹಳ್ಳಿಹಳ್ಳಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಗದಗ ತಾಲೂಕಿನ ಕೊಪ್ಪಳ ರಸ್ತೆಯ ಅಡವಿಸೋಮಾಪುರದಲ್ಲೂ ಪ್ರತಿಭಟನೆ ನಡೆಯಿತು. ಸಮೀಪದಲ್ಲಿ ಇರುವ ಪೆಟ್ರೋಲ್ ಬಂಕ್ ನಲ್ಲಿ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆದೇಶದ ಮೇರಿಗೆ ನರಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಆರ್. ಯಾವಗಲ್ ಆಜ್ಞೆಯಂತೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗ್ರಾಪಂನ ಮಾಜಿ ಸದಸ್ಯ ರಾಜು ಪೆಂಡಾರ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕ್ ಯಾವಗಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ವಿವೇಕ್ ಯಾವಗಲ್ ಅವರು, ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸಿಕೊಳ್ಳಲು ಬರುತ್ತಿದ್ದ ಗ್ರಾಹಕರನ್ನೇ ಮಾತನಾಡಿಸಿ, ಪೆಟ್ರೋಲ್, ಡೀಸೆಲ್ ದರದಿಂದ ಜನರಿಗೆ ಆಗುತ್ತಿರುವ ನೋವುಗಳನ್ನು ಆಲಿಸುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಹಕರು ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಟಂಟಂ ಚಾಲಕನೊಬ್ಬ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಡವರು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಬಿಜೆಪಿಗೆ ಬೆಂಬಲಿಸಿದ್ದಕ್ಕೆ ಈ ಪರಿಸ್ಥಿತಿ ಅನುಭವಿಸಬೇಕಾಗಿದೆ. ಹೀಗಾಗಿ ಯಾರೂ ಬಿಜೆಪಿಗೆ ಸಪೋರ್ಟ್ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಗವಿಕಲ ವ್ಯಕ್ತಿಯೊಬ್ಬರು, ಬಿಜೆಪಿಗೆ ಮತ ಹಾಕಿ ತಪ್ಪು ಮಾಡಿದ್ದೇವೆ. ಕೊರೊನಾದಿಂದಾಗಿ ಕೈಯಲ್ಲಿ ಕೆಲಸವಿಲ್ಲ. ನಮಗೆ ರೂ. 1400 ಗೌರವ ಧನ ನೀಡುತ್ತಾರೆ. ಇದರಲ್ಲಿಯೇ ನಾನು ಕುಟುಂಬ ನಿರ್ವಹಣೆ ಮಾಡಬೇಕು. ಐವರು ಮನೆಯಲ್ಲಿದ್ದೇವೆ. ಲಾಕ್ ಡೌನ್ ಸಂದರ್ಭದಲ್ಲಿಯೇ ಅಗತ್ಯ ವಸ್ತುಗಳ ಬೆಲೆ, ಗ್ಯಾಸ್, ಪೆಟ್ರೋಲ್ ಬೆಲೆ ಏರಿಸಿದ್ದಾರೆ. ಇದರಿಂದಾಗಿ ಬದುಕೇ ಬೇಡ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅನ್ನದಾತ ಸರ್ಕಾರವೇ ರಾಜ್ಯದಲ್ಲಿ ಆಡಳಿತದಲ್ಲಿದ್ದರೆ ನಮ್ಮಂತಹ ಬಡವರು ಉತ್ತಮ ಜೀವನ ಸಾಗಿಸಬಹುದು ಎಂದು ಹೇಳಿದ್ದಾರೆ.

ಕೂದಲು ಆಯ್ದು ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ, ಸಾರ್, ನನಗೆ ತುಂಬಾ ತೊಂದರೆಯಾಗುತ್ತಿದೆ. ಊರೂರು ಅಲೆದು ನಾವು ಕೂದಲು ಆರಿಸಿ ಜೀವನ ಮಾಡುತ್ತೇವೆ. ಸದ್ಯ ಲಾಕ್ ಡೌನ್ ಇರುವುದರಿಂದ ಜನ ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ದಿನಂಪ್ರತಿ ರೂ. 120 ರಿಂದ 130 ದುಡಿಯುತ್ತಿದ್ದೇವೆ. ಆದರೆ, ಪೆಟ್ರೋಲ್ ದರ ನೂರು ದಾಟಿದೆ. ಇದರಿಂದಾಗಿ ದುಡಿದ ಹಣ ಕೈ ಸೇರುತ್ತಿಲ್ಲ. ಪೆಟ್ರೋಲ್ ಗಾಗಿಯೇ ಅದು ಖರ್ಚಾಗುತ್ತಿದೆ. ನಮಗೆ ತುಂಬಾ ಕಷ್ಟವಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ ಬಡವರ ಪರ ಕಾರ್ಯ ಮಾಡುತ್ತಿಲ್ಲ. ನಮ್ಮಂತಹ ಜನರ ಬದುಕು ನೋಡಿಕೊಂಡು ಅವರ ದರ ಏರಿಸುವ ಚಿಂತನೆ ಮಾಡಬೇಕು. ಈ ಸರ್ಕಾರ ಯಾವುದಕ್ಕೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ವಿಜಯ ಚಲವಾದಿ, ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಹಂಡಿ, ಮಲ್ಲಪ್ಪ ಅಸುಂಡಿ, ಮುಖಂಡರಾದ ಗಣೇಶ್ ಜಡಿ, ನಂದೇಶಪ್ಪ ಬೆಳ್ಳಿ, ಹಜರತಸಾಬ ಪೆಂಡಾರ, ಜಿನೇಸಾಬ ಮುಲ್ಲಾನವರ, ಬಸವರಾಜ್ ಈರಣ್ಣವರ, ರಾಘವೇಂದ್ರ ಪುರದ, ಮಂಜುನಾಥ ಸೊರಟೂರ, ಮೌಲಾಸಾಬ ಪೆಂಡಾರ, ಲೋಹಿತ್ ಗೌಡ್ರು, ಗೋಪಾಲ ಕಾರಬಾರಿ, ಸುಭಾಷ್ ಲಮಾಣಿ, ಭಕ್ಷಿ ಪೆಂಡಾರ, ಖಾದರ ಅಲ್ತಾಪ ನದಾಫ್, ರಫೀಕ್ ಮುಲ್ಲಾನವರ, ಗ್ರಾ.ಪಂ ಮಾಜಿ ಸದಸ್ಯ ಈರಪ್ಪ, ಬಸವರಾಜ್ ಹಮ್ಮಗಿ ಸೇರಿದಂತೆ, ಅಡವಿಸೋಮಾಪೂರ ತಾಂಡಾ, ಪಾಪನಾಶಿ ತಾಂಡಾದ ನೂರಾರು ಜನ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here