ಬೈಕ್ ಸೀಜ್ ಆಗುತ್ತದೆ ಎಂದು ಸೈಕಲ್ ಏರಿ ಬಂದ ಆಸಾಮಿಗಳು!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸೈಕಲ್ ಏರಿದವನೇ ಮಹಾ ಶೂರ ಎಂದು ಜಿಲ್ಲೆಯಲ್ಲಿ ಜನ ಮಾತನಾಡಿಕೊಳ್ಳುವಂತಾಗಿದೆ. ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿರುವುದರಿಂದಾಗಿ ಸರ್ಕಾರ, ಲಾಕ್ ಡೌನ್ ಘೋಷಣೆ ಮಾಡಿದೆ. ಹೀಗಾಗಿ ವಾಹನಗಳನ್ನು ರಸ್ತೆಗೆ ಇಳಿಸದಂತೆ ಸರ್ಕಾರ ಖಡಕ್ ವಾರ್ನಿಂಗ್ ಮಾಡಿದೆ. ಇದರಿಂದಾಗಿ ಜನರು ಸೈಕಲ್ ನ ಮೊರೆ ಹೋಗಿದ್ದಾರೆ.

ಹೀಗಾಗಿ ನಗರದ ಬಹುತೇಕ ಕಡೆ ಸೈಕಲ್ ಗಳದ್ದೇ ದರ್ಬಾರ್ ಎನ್ನುವಂತಾಗಿದೆ. ಸೈಕಲ್ ಏರಿ ಮಾರುಕಟ್ಟೆಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇನ್ನೊಂದೆಡೆ ವ್ಯಾಪಾರಸ್ಥರು ಕೂಡ ಸೈಕಲ್ ಏರಿ ಮಾರುಕಟ್ಟೆಗೆ ಬಂದಿದ್ದಾರೆ.

ಬೈಕ್ ಭೀತಿಯ ಹಿನ್ನೆಲೆಯಲ್ಲಿ ಈ ಜನರು ಸೈಕಲ್ ಏರಿ ಬಂದಿದ್ದಾರೆ. ಆದರೆ, ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಹೀಗಾಗಿ ಅವರನ್ನೂ ಒಳಗೆ ಬಿಡಲಿಲ್ಲ. ನಾಮಜೋಶಿ ರಸ್ತೆ, ಟಾಂಗಾ ಕೂಟ, ಹಳೆಯ ಬಸ್ ನಿಲ್ದಾಣದ ಬಳಿ ಸೈಕಲ್ ಸವಾರರು ಸೈಕಲ್ ಸವಾರರು ಎಂಟ್ರಿ ಕೊಟ್ಟಿದ್ದರು.


Spread the love

LEAVE A REPLY

Please enter your comment!
Please enter your name here