ಮತ್ತೆ ವಿವಾದ ಎಳೆದುಕೊಂಡ ನಟಿ ಕಂಗನಾ!

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ನಟಿ ಯಾಮಿ ಗೌತಮ್ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾಮಿ, ಬಾಲಿವುಡ್ನ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ವಿಚಾರವನ್ನು ಜಾಲತಾಣದಲ್ಲಿ ಅಧಿಕೃತವಾಗಿ ಹೇಳಿಕೊಂಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಕಿತ್ತಾಟವೊಂದು ನಡೆದಿದೆ. ಈ ಕಿರಿಕ್ ನಲ್ಲಿ ಕೂಡ ನಟಿ ಕಂಗನಾ ರಣಾವತ್ ಹೆಸರು ಕೇಳಿ ಬರುತ್ತಿದೆ . ಮದುವೆ ಫೋಟೋ ಹಂಚಿಕೊಂಡಿದ್ದ ಯಾಮಿ ಗೌತಮ್, ಆಶೀರ್ವಾದ ಕೋರಿದ್ದರು. ಕುಟುಂಬಸ್ಥರ ಆಶೀರ್ವಾದ ಪಡೆದು ಮದುವೆಯಾಗಿದ್ದೇವೆ. ಪ್ರೀತಿ ಹಾಗೂ ಸ್ನೇಹದ ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದಿದ್ದರು.

ಈ ಫೋಟೋ ಕಂಡು ಸಾಕಷ್ಟು ಜನ ತಾರೆಯರು ಶುಭಾಶಯ ತಿಳಿಸಿದ್ದರು. ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ, ‘ರಾಧೆ ಮಾ ಅವರಂತೆ ಶುದ್ಧ ಮತ್ತು ಧರ್ಮನಿಷ್ಠರಾಗಿ ಕಾಣುತ್ತಿದ್ದೀರಿ ಎಂದು ಕಮೆಂಟ್ ಹಾಕಿದ್ದರು. ಈ ಕಮೆಂಟ್ ಗೆ ಸಿಟ್ಟಾಗಿರುವ ನಟಿ ಕಂಗನಾ, ‘ಈ ಜಿರಲೆ ಎಲ್ಲಿಂದ ಬಂತು? ಯಾರಾದರೂ ನನ್ನ ಚಪ್ಪಲಿ ತನ್ನಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಸದ್ಯ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಯಾಮಿ, ಹಿಂದಿಯ ‘ಭೂತ್ ಪೊಲೀಸ್’ ಸಿನಿಮಾದಲ್ಲಿ ಸದ್ಯ ನಟಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಅವರು ಕಾಲಿಟ್ಟಿದ್ದರು.


Spread the love

LEAVE A REPLY

Please enter your comment!
Please enter your name here