ಮಹಾಮಾರಿಗೆ ಬಲಿಯಾದ ಐದು ದಿನಗಳ ಬಾಣಂತಿ!

0
Spread the love

ವಿಜಯಸಾಕ್ಷಿ ಸುದ್ದಿ, ಮಂಡ್ಯ

Advertisement

ಮಹಾಮಾರಿಗೆ 5 ದಿನಗಳ ಬಾಣಂತಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀ ಸೋಂಕಿಗೆ ಬಲಿಯಾದ ಮಹಿಳೆ. ನಗರದಲ್ಲಿನ ಮಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

ತಾಯಿಯನ್ನು ಕಳೆದುಕೊಂಡು ಐದು ದಿನದ ಮಗು ತಬ್ಬಲಿಯಾಗಿದೆ. ಶಿಲ್ಪಶ್ರೀ (32) ಕೊರೊನಾಗೆ ಬಲಿಯಾದ ಬಾಣಂತಿ. ಮಹಿಳೆಯಲ್ಲಿ ಕಳೆದ ಒಂದು ವಾರದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಕಳೆದ ಐದು ದಿನಗಳ ಹಿಂದೆಯೇ ಮಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಶಿಲ್ಪಶ್ರೀ ಜನ್ಮ ನೀಡಿದ್ದರು. ಸದ್ಯ 5 ದಿನಗಳ ಮಗುವನ್ನು ಬಿಟ್ಟು ತಾಯಿ ಇಹಲೋಕ ತ್ಯಜಿಸಿದ್ದು, ಮಗು ತಬ್ಬಲಿಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

LEAVE A REPLY

Please enter your comment!
Please enter your name here