HomeGadag Newsಮಾತು ತಪ್ಪಿದ ಪ್ರಧಾನಿ ಮೋದಿ; ಉಮರ್ ಫಾರೂಕ್ ಖಂಡನೆ

ಮಾತು ತಪ್ಪಿದ ಪ್ರಧಾನಿ ಮೋದಿ; ಉಮರ್ ಫಾರೂಕ್ ಖಂಡನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ:

ಅಚ್ಚೇ ದಿನ್ ಆನೆವಾಲೆ ಎಂದು ಸುಳ್ಳು ಭರವಸೆ ಕೊಟ್ಟು ಜನರಿಂದ ಮತ ಪಡೆದು ಅಧಿಕಾರವನ್ನು ಗಿಟ್ಟಿಸಿಕೊಂಡ ಪ್ರಧಾನಿ, ಕೊಟ್ಟ ಮಾತಿನಂತೆ ನಡೆದಿಲ್ಲ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ದ ಅಧ್ಯಕ್ಷ ಉಮರ್ ಫಾರೂಕ ಹುಬ್ಬಳ್ಳಿ ಮೋದಿಯವರ ಬಂಡವಾಳ ಶಾಹಿ ನೀತಿಯನ್ನು ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಫಾರೂಕ್ ಹುಬ್ಬಳ್ಳಿ, ಅಧಿಕಾರಕ್ಕೆ ಬಂದ ನಂತರ ಭಾರತೀಯ ನಾಗರಿಕರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿದ್ದರು. ಅದರೆ ಎಂಟು ವರುಷಗಳಾದರೂ ಖಾತೆಗೆ ಯಾವುದೇ ಹಣ ಜಮಾ ಆಗಿರುವುದಿಲ್ಲ.

ಸಬಕಾ ಸಾಥ್, ಸಬಕಾ ವಿಕಾಸ್ ಮತ್ತು ಸಬಕಾ ವಿಶ್ವಾಸ ಎಂದು ಇಡೀ ದೇಶದಲ್ಲಿ ಹಿಂದಿ ಭಾಷೆ ಹೇರಿಕೆ ಮಾಡಿ ಕನ್ನಡ , ತಮಿಳು, ಮರಾಠಿ, ಮಲಯಾಳಂ ಮತ್ತು ಮುಂತಾದ ಇತರೆ ಭಾಷಿಕರಲ್ಲಿ ಅವಿಶ್ವಾಸ ಮೂಡಿಸಿದ್ದಾರೆ. ದೇಶದ ಬೆನ್ನೆಲಬು ಆಗಿರುವ ರೈತರ ಹಿತಾಸಕ್ತಿ ವಿರುದ್ಧ ಸಂಬಂಧಿಸಿದಂತೆ ಕಾನೂನು ಪಾಸು ಮಾಡಿ ರೈತರು ನಿರಂತರ ಹೋರಾಟ ಮಾಡಿದ ನಂತರ ಪ್ರಧಾನಿ ಮೋದಿಯವರು ರೈತರ ಕ್ಷಮೆ ಕೇಳುವಂತಾಗಿದ್ದು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿಲ್ಲ ಅನ್ನುವುದು ಇದರಿಂದಾಗಿ ಗೋಚರವಾಗಿದೆ.

ರೈಲು, ವಿಮಾನ ನಿಲ್ದಾಣಗಳನ್ನು ಮತ್ತು ಬಂದರುಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದು, ದೇಶವನ್ನು ಬಂಡವಾಳ ಶಾಹಿಗಳ ಕೈಗೆ ಕೊಟ್ಟಿದ್ದು, ದುಡಿಯುವ ಕೈಗಳಿಗೆ ಸೂಕ್ತ ದುಡಿಮೆ ಮತ್ತು ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ.

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯಾಗಿ ಬಡವರ ಮತ್ತು ಮಧ್ಯಮ ವರ್ಗದವರ ಹೊಟ್ಟೆ ಮೇಲೆ ಬರೆ ಎಳೆದಿದ್ದಾರೆ.

ಜಿಡಿಪಿ ದರವು ಪ್ರಧಾನಿ ಮೋದಿಯವರ ಕಾಲದಲ್ಲಿ ಕುಸಿದಿರುವಷ್ಟು ಬೇರೆ ಯಾವ ಪ್ರಧಾನಿ ಕಾಲದಲ್ಲಿ ಕುಸಿದಿಲ್ಲ. ದೇಶದ ಅರ್ಥವ್ಯವಸ್ಥೆ ನಿರ್ವಹಣೆ ಸರಿಯಾದ ರೀತಿ ಆಗುತ್ತಿಲ್ಲ ಎಂದು ಅವರು ದೂರಿದ್ದಾರೆ.

ರಸ್ತೆಯಲ್ಲಿರುವ ಗುಂಡಿಗಳು, ಅನೇಕ ನಾಗರಿಕರ ಜೀವ ಹಾನಿಗೆ ಸಾಕ್ಷಿಯಾಗಿವೆ. ನೀರು ಸಂಗ್ರಹಕ್ಕೆ ಅನೂಕೂಲವಾಗಿರುವ ಆಣೆಕಟ್ಟುಗಳು ಹೂಳು ತುಂಬಿಕೊಂಡಿದ್ದು, ಮಳೆ ಬರದಿದ್ದರೆ ಕ್ರಿಕೆಟ್ ಮೈದಾನವಾಗುತ್ತವೆ. ಅವುಗಳ ಅಭಿವೃದ್ಧಿಗೆ ಯಾವುದೇ ಯೋಜನೆಗಳಿಲ್ಲ ಎಂದಿದ್ದಾರೆ.

ತಮ್ಮದೇ ಪಕ್ಷದ ಅನೇಕ ಜನಪ್ರತಿನಿಧಿಗಳು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿರುವುದು ನೋಡಿದರೆ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಶೇಕಡಾ 40 ರಷ್ಟು ಕಮೀಶನ್ ಪಡೆಯುವ ಸರ್ಕಾರದ ವ್ಯವಸ್ಥೆ ನಿರ್ಮಾಣವಾಗಿದ್ದನ್ನು ನೋಡಿದರೆ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಆಡಳಿತವನ್ನು ನಿರೀಕ್ಷೆ ಮಾಡಲಿಕ್ಕೆ ಆಗುವುದಿಲ್ಲ.
ಬಡವರ, ರೈತರ, ಕಾರ್ಮಿಕರ ಮಹಿಳೆಯರ, ಮಕ್ಕಳ ಮತ್ತು ನಿರ್ಗತಿಕರ ಆಶಾಕಿರಣಕ್ಕೆ ಪೂರಕವಾಗುವ ಯಾವ ಯೋಜನೆಗಳು ವಿಫುಲವಾಗಿ ತರುತ್ತೇವೆ ಎಂಬ ಅಚ್ಚೇ ದಿನ ಆಯೆಂಗೆ ಎಂಬ ಮಾತು ಬರೀ ಸುಳ್ಳು. ಕೊಟ್ಟ ಮಾತಿನಂತೆ ನಡೆಯದ ಪ್ರಧಾನಿ ಮೋದಿಯವರು ಆಗಿದ್ದಾರೆ ಎಂದು ಉಮರ್ ಫಾರೂಕ್ ಟೀಕಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!