ಮೂರು ರಾಜ್ಯಗಳಲ್ಲಿ ಸಂಭವಿಸಿದ ಭೂ ಕಂಪನ!

0
Spread the love

ವಿಜಯಸಾಕ್ಷಿ ಸುದ್ದಿ, ನವದೆಹಲಿ

Advertisement

ಮೂರು ರಾಜ್ಯಗಳಲ್ಲಿ ಬೆಳ್ಳಂ ಬೆಳಿಗ್ಗೆಯೇ ಜನರಿಗೆ ಭೂ ಕಂಪನದ ಅನುಭವವಾಗಿದೆ.
ಈಶಾನ್ಯ ರಾಜ್ಯಗಳಾದ ಆಸ್ಸಾಂ, ಮಣಿಪುರ ಹಾಗೂ ಮೇಘಾಲಯಗಳಲ್ಲಿ ಶುಕ್ರವಾರ ಬೆಳಿಗ್ಗೆ ಲಘ ಭೂಕಂಪ ಸಂಭವಿಸಿದೆ.

ಆಸ್ಸಾಂನ ಸೋನಿಪತ್ ನಲ್ಲಿ 4.1 ತೀವ್ರತೆ, ಮಣಿಪುರದ ಚಂಡೇಲ್ ಹಾಗೂ ಪಶ್ಚಿಮಖಾಸಿ ಹಿಲ್ಸ್ ಪ್ರದೇಶದಲ್ಲಿ 3.0ತೀವ್ರತೆ, ಮೇಘಾಲಯದಲ್ಲಿ 2.6 ತೀವ್ರತೆಯ ಲಘು ಭೂ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಸಂಸ್ಥೆ(ಎನ್ ಸಿಎಸ್) ತಿಳಿಸಿದೆ.

ಆಸ್ಸಾಂ ರಾಜ್ಯದ ತೇಜ್ ಪುರದಲ್ಲಿ ಕಳೆದ ಮೂರು ದಿನಗಳಲ್ಲಿಯೇ ಎರಡನೇ ಬಾರಿ ಭೂಕಂಪ ಸಂಭವಿಸಿದೆ. ಇತ್ತೀಚೆಗಷ್ಟೇ ರೇಜ್ ಪುರದಲ್ಲಿ 3.0 ತೀವ್ರವತೆಯ ಭೂಕಂಪ ಸಂಭವಿಸಿತ್ತು. 10 ಕಿ.ಮೀ ಆಳದಲ್ಲಿ ಸಂಭವಿಸಿದ ಈ ಕಂಪನದ ಕೇಂದ್ರಬಿಂದು ತೇಜ್ ಪುರದ ಪಶ್ಚಿಮಕ್ಕೆ 60ಕಿ.ಮೀ ದೂರದಲ್ಲಿತ್ತು. ಶುಕ್ರವಾರ ಸಂಭವಿಸಿದ ಭೂಕಂಪ 22 ಕಿ.ಮೀ ಆಳದಲ್ಲಿ ಸಂಭವಿಸಿದೆ. ತೇಜ್ ಪುರದಿಂದ 36 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಇತ್ತು ಎಂದು ಸಂಸ್ಥೆ ತಿಳಿಸಿದೆ.

ಮಣಿಪುರದ ಚಾಂಡೇಲ್ ನಲ್ಲಿ ಸಂಭವಿಸಿದ ಕಂಪನದ ತೀವ್ರತೆ 3.0ರಷ್ಟಿತ್ತು. ಇದು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಇದಕ್ಕೂ ಮುನ್ನ ಇದೇ ರಾಜ್ಯದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು.


Spread the love

LEAVE A REPLY

Please enter your comment!
Please enter your name here