ವಿಜಯಸಾಕ್ಷಿ ಸುದ್ದಿ, ಹಾವೇರಿ
ಈ ಭೂಮಿಯಲ್ಲಿ ಹುಟ್ಟಿದ ಪ್ರತೀ ಜೀವಿಗಳೂ ಕೂಡ ತಮ್ಮ ಸಂತತಿಯನ್ನು ಮುಂದುವರೆಸುವ ಉದ್ದೇಶದಿಂದ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿಕೊಳ್ಳುವದು ಪ್ರಕೃತಿಯ ನಿಯಮ. ಮನುಷ್ಯ ಜೀವಿಯನ್ನು ಹೊರತುಪಡಿಸಿದರೆ, ಉಳಿದೆಲ್ಲ ಜೀವಿಗಳಲ್ಲಿಯೂ ಈ ಸಂತಾನೋತ್ಪತ್ತಿ ಕ್ರಿಯೆಗೆ ನಿಗದಿತವಾದ ಕಾಲವಿದೆ. ಇತರ ಜೀವಿಗಳು ಮನುಷ್ಯರಂತೆ ಕೇವಲ ಮೋಜಿಗಾಗಿಯಷ್ಟೇ ಅಲ್ಲದೆ, ಸಂತಾನೋತ್ಪತ್ತಿ ಕ್ರಿಯೆಯನ್ನು ನಿಗದಿತ ಕಾಲದಲ್ಲಿ ಮಾತ್ರ ಒಂದು ವೃತದಂತೆಯೇ ಪಾಲಿಸುತ್ತವೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೀಗಿಹಳ್ಳಿ ಪ್ಲಾಟ್ ನಲ್ಲಿ ಇತ್ತೀಚೆಗೆ ಎರಡು ಕೇರೆಹಾವುಗಳು ಮಿಲನದಲ್ಲಿ ತೊಡಗಿರುವ ದೃಶ್ಯವನ್ನು ಉರಗ ಪ್ರೇಮಿ ಕೃಷ್ಣಾರೆಡ್ಡಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಆರೇಳು ನಿಮಿಷಗಳ ಕಾಲ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಕೇರೆಹಾವುಗಳು, ಸಾಕಷ್ಟು ಜನ ಸುತ್ತಲೂ ನಿಂತು ಕುತೂಹಲದಿಂದ ನಿಂತು ನೋಡುತ್ತಿದ್ದರೂ ವಿಚಲಿತರಾಗದೇ ತಮ್ಮದೇ ಧ್ಯಾನದಲ್ಲಿ, ಸರಸ ಸಲ್ಲಾಪದಲ್ಲಿ ತೊಡಗಿರುವುದು ಕಂಡುಬಂದಿತು.