ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ವೇಗವಾಗಿ ಬರುತ್ತಿದ್ದ ಬೈಕ್ ಗೆ ಪೊಲೀಸರು ಕೈ ಮಾಡಿದ್ದ ಕಾರಣಕ್ಕಾಗಿ ಬೈಕ್ ನಲ್ಲಿದ್ದ ಯುವಕ ಆಯತಪ್ಪಿ ಬಿದ್ದ ಪರಿಣಾಮವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ನ್ಯೂ ಇಂಗ್ಲೀಷ್ ಮಿಡಿಯಂ ಸ್ಕೂಲ್ ಬಳಿ ನಡೆದಿದೆ.
ಜನತಾ ಕರ್ಫ್ಯೂ ಜಾರಿಯಲ್ಲಿದೆ. ಪೊಲೀಸ್ ಎಲ್ಲ ಕಡೆ ನಾಕಾಬಂದಿ ಹಾಕಿದ್ದು, ಅನಗತ್ಯ ಬೈಕ್ ಸವಾರರ ಒಡಾಟಕ್ಕೆ ಕಡಿವಾಣ ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ವೇಗ ವಾಗಿ ಬರುತ್ತಿದ್ದ ಬೈಕ್ ತಡೆಯಲು ಮುಂದಾದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಬಿದ್ದಿದ್ದರಿಂದ ಯುವಕನೊರ್ವನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಪೊಲೀಸರ ವಿರುದ್ದ ಸಾರ್ವಜನಿಕರ ಆಕ್ರೋಶ
ಆದರೆ ಯುವಕನ ಕಡೆಯವರು ಹೇಳೋದೆ ಬೇರೆ. ಸುಮ್ಮನೆ ಬೈಕ್ ನಲ್ಲಿ ಹೋಗುವಾಗ ಅಡ್ಡಗಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಿ ವಾಗ್ವಾದಕ್ಕಿಳಿದರು. ಕಸಬಾ ಪೇಟ ಪೊಲೀಸ್ ಠಾಣೆಯ ಎಎಸ್ಐ ಎಸ್. ಎ ಗೌರಿಮಠ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರೋಜಾ ಉಪವಾಸ ಇರುವ ಯುವಕನಿಗೆ ಈ ರೀತಿ ಹೊಡೆಯುವುದು ಎಷ್ಟು ಸರಿ ಎಂದು ಮುಗಿಬಿದ್ದರು.
ಆದರೆ ಆತನನ್ನು ನಾವು ಹೊಡೆದಿಲ್ಲ. ಆತನೇ ಬೈಕನಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ಹೇಳಲು ಮುಂದಾದ ಪೊಲೀಸರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷವೊಂದರ ಮುಖಂಡರು ಎಂಟ್ರಿ ಆಗಿ ಯುವಕರನ್ನ ಸಮಾಧಾನ ಪಡಿಸಿ ಗಾಯಗೊಂಡ ಯುವಕನನ್ನ ಆಸ್ಪತ್ರಗೆ ಕಳಿಸಿದರು.
ಹಳೆ ಹುಬ್ಬಳ್ಳಿಯ ಕಸಬಾ ಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.