ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಕೋವಿಡ್ ಲಸಿಕೆಯ ಅಭಾವದಿಂದ ಜನರು ಪರದಾಡುತ್ತಿದ್ದಾರೆ. ಸಮರ್ಪಕವಾಗಿ ಲಸಿಕೆ ಪೂರೈಸಲಾಗದ ಸರ್ಕಾರದ ನಡೆಗೆ ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದೆ. ‘ನಿಮ್ಮಿಂದ ವ್ಯಾಕ್ಸಿನ್ ನೀಡಲು ಸಾಧ್ಯವೇ ಇಲ್ಲ ಎಂದಾದರೆ ಹೇಳಿ ನಾವು ಸರ್ಕಾರದಿಂದ ವ್ಯಾಕ್ಸಿನ್ ಒದಗಿಸಲಾಗದು’ ಎಂದೇ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳಿದೆ.
ಲಸಿಕೆ ಪಡೆದರೆ ಕೊರೊನಾದಿಂದ ಪ್ರಾಣ ಉಳಿಸಿಕೊಳ್ಳಬಹುದು ಇದೀಗ ಸಾಕಷ್ಟು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಉಳಿದವರ ಜೀವರಕ್ಷಿಸಲಾದರೂ ಸರ್ಕಾರ ಲಸಿಕೆ ನೀಡಬೇಕಿದೆ. ಕರ್ನಾಟಕದ ಜನಸಂಖ್ಯೆ 6 ಕೋಟಿಗೂ ಅಧಿಕವಾಗಿದ್ದು, ಈವರೆಗೆ ಒಂದೇಒಂದು ಪರ್ಸ್ಂಟ್ ನಷ್ಟು ಜನರಿಗೂ ಲಸಿಕೆ ನೀಡಲು ಸಾಧ್ಯವಾಗಿಲ್ಲ ವೆಂದರೆ ಇದೆಂತಹ ವ್ಯಾಕ್ಸಿನ್ ಅಭಿಯಾನ, ಇದೆಂತಹ ಲಸಿಕಾ ಉತ್ಸವ ಎಂದು ಕ್ಲಾಸ್ ತಗೆದುಕೊಂಡಿದೆ.
ಮೊದಲ ಡೋಸ್ ಲಸಿಕೆ ಪಡೆಯುವವರ ಕಥೆ ಬಿಡಿ, ಎರಡನೇ ಡೋಸ್ ಲಸಿಕೆ ಪಡೆಯವವರಿಗೂ ಲಸಿಕೆ ಸಿಗುತ್ತಿಲ್ಲವೆಂದರೆ ಹೇಗೆ..? 2 ನೇ ಡೋಸ್ ಪಡೆಯುವುದು ಅವರ ಹಕ್ಕಲ್ಲವೇ? 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದ್ದು, ಈ ಗ್ಯಾಪ್ ನ್ನು ನೀವು ಹೇಗೆ ಸರಿಪಡಿಸುತ್ತೀರಿ? ಇದೇ ರೀತಿ ಮುಂದುವರೆದರೆ, ಎರಡೇ ದಿನಗಳಲ್ಲಿ ವ್ಯಾಕ್ಸಿನೇಷನ್ ನೀಡುವಂತೆ ಆದೇಶ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ವ್ಯಾಕ್ಸಿನ್ 2ನೇ ಡೋಸ್ ಗೆ 6 ವಾರಗಳ ಕಾಲಾವಕಾಶವಿದೆ. ವ್ಯಾಕ್ಸಿನ್ ನೀಡುವುದು ವಿಳಂಬವಾದರೂ 1ನೇ ಡೋಸ್ ವ್ಯರ್ಥವಾಗಲ್ಲ. ಕೋವಿಶೀಲ್ಡ್ ಗೆ 8 ವಾರ ಕಾಲಾವಕಾಶವಿದೆ ಎಂದು ಕೇಂದ್ರ ಸರ್ಕಾರದ ಎಎಸ್ಜಿ ಐಶ್ವರ್ಯಾ ಭಾಟಿ ಉತ್ತರ ನೀಡಿದ್ದಾರೆ.