ರಾತ್ರಿ ಸ್ವಾಮೀಜಿಗಳ ಕಾಲಿಗೆ ಬೀಳೋದು, ಬೆಳಗ್ಗೆದ್ದ ಧರ್ಮ ಒಡೆಯೋದು

0
Spread the love

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ

Advertisement

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ರಾತ್ರಿ ಹೋಗಿ ಹಿಂದು ಸ್ವಾಮೀಜಿಗಳ ಕಾಲಿಗೆ ಬೀಳುವುದು, ಬೆಳಗ್ಗೆ ಎದ್ದು ಧರ್ಮ ಒಡೆಯವ ಕೆಲಸ ಮಾಡ್ತಾರೆ. ಆದರೆ, ನಾವು ಎದೆ ಉಬ್ಬಿಸಿ ಪೂಜೆ ಮಾಡುತ್ತೇವೆ. ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಟಾಂಗ್ ನೀಡಿದರು.


ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಹಿಂದುತ್ವದ ಮೇಲೆ‌ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಜೆಡಿಎಸ್ ಅಧಿಕಾರದಲ್ಲಿದ್ದಾಗ ಕೋಮುಗಲಭೆಗಳಾಗಿವೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದು-ಮುಸ್ಲಿಮರು ಅನ್ಯೋ‌ನ್ಯತೆಯಿಂದ ಇದ್ದಾರೆ.

ಲಿಂಗಾಯತ, ವೀರಶೈವ ಎಂದು ಒಡೆದು ನಮ್ಮಲ್ಲೇ ಜಗಳ ತಂದಿಟ್ಟಿದ್ದೀರಿ ಎಂದು ಹೆಸರು ಹೇಳದೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಅವರ ಹಾಗೆ ಬುರ್ಕಾ, ಟೋಪಿ ಹಾಕಿ ನಮಾಜ್ ಮಾಡಿ ನಾಟಕ ಮಾಡುವುದಿಲ್ಲ ಎಂದು ಟಾಂಗ್ ನೀಡಿದರು.


Spread the love

LEAVE A REPLY

Please enter your comment!
Please enter your name here