ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ
ತಾಲೂಕಿನ ಬಾಗಳಿ ಗ್ರಾಮದ ನಿವಾಸಿ ಎಂ.ಅಜ್ಜಪ್ಪರವರು (61)ಅನಾರೋಗ್ಯದಿಂದ ಶನಿವಾರ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಕಾಳಮ್ಮ ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಗ್ರಾಮದ ರುದ್ರಭೂಮಿಯಲ್ಲಿ ಶನಿವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಜ್ಜಪ್ಪ ಬಾಗಳಿ ಅವರು ವಿದ್ಯವಂತರಲ್ಲದಿದ್ದರೂ ಸಹ ಬಾಲ್ಯದಿಂದಲೇ ರಂಗ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಗುರುಗಳಾದ ಚಿಗಟೇರಿ ಕೊಟ್ರಪ್ಪಯ್ಯ ಗವಾಯಿಗಳ ಆತ್ಮೀಯ ಶಿಷ್ಯರಾಗಿ ತಬಲವಾದಕರು, ಹಾಡುಗಾರಿಕೆ ಉತ್ತಮ ಅಭಿನಯ ಹೊಂದಿದ್ದರು.

ಗೋಣಿಬಸವೇಶ್ವರ ನಾಟಕದಲ್ಲಿ ಶಿವನಯ್ಯನ , ಸಂಗ್ಯಬಾಳ್ಯ, ಗೀಗಿಪದ, ಸೇರಿದಂತೆ ನಾಟಕ, ಯಕ್ಷಗಾನದಲ್ಲಿ ಅಭಿನಯಿಸಿದ್ದು. ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಇವರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಸಂತಾಪ
ಶ್ರೀ ವಿಶ್ವಕಲಾ ರೈತ ನಾಟ್ಯಸಂಘ, ಕನಕೇಶ್ವರ ಯುವಕ ಕಲಾ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

