ವಿಷ ಇಟ್ಟ ಕಿಡಿಗೇಡಿಗಳು; 30ಕ್ಕೂ ಅಧಿಕ ಹಂದಿಗಳ ಸಾವು

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ನಗರದ ಸಜ್ಜಿಓಣಿಯಲ್ಲಿ ಮಂಗಳವಾರ ರಾತ್ರಿ ಕೆಲ‌ ಕಿಡಿಗೇಡಿಗಳು ಅಲ್ಲಿದ್ದ ಹಂದಿಗಳಿಗೆ ವಿಷ ಇಟ್ಟಿದ್ದರಿಂದ ಮೂವತ್ತಕ್ಕೂ ಅಧಿಕ ಹಂದಿಗಳು ಅಸುನೀಗಿವೆ.
ದುರ್ಗಪ್ಪ ಪೂಜಾರ ಅವರಿಗೆ ಸೇರಿದ ಈ ಹಂದಿಗಳ ಸಾವಿನಿಂದ ಸುಮಾರು 40 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ವಿಷ ಇಟ್ಟಿದ್ದಾರೆ.
ಹಂದಿ ಸಾಕಾಣಿಕೆಯಿಂದ ಬದುಕು ಸಾಗಿಸುತ್ತಿರುವ ನಮಗೆ ದಿಢೀರನೇ ಇಷ್ಟೊಂದು‌‌ ನಷ್ಟ ಎದುರಿಸುವ ಶಕ್ತಿ ಇಲ್ಲ ಎಂದು ಅವರು ಅಲವತ್ತುಕೊಂಡರು.

Advertisement

Spread the love

LEAVE A REPLY

Please enter your comment!
Please enter your name here