ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ನಗರದ ಸಜ್ಜಿಓಣಿಯಲ್ಲಿ ಮಂಗಳವಾರ ರಾತ್ರಿ ಕೆಲ ಕಿಡಿಗೇಡಿಗಳು ಅಲ್ಲಿದ್ದ ಹಂದಿಗಳಿಗೆ ವಿಷ ಇಟ್ಟಿದ್ದರಿಂದ ಮೂವತ್ತಕ್ಕೂ ಅಧಿಕ ಹಂದಿಗಳು ಅಸುನೀಗಿವೆ.
ದುರ್ಗಪ್ಪ ಪೂಜಾರ ಅವರಿಗೆ ಸೇರಿದ ಈ ಹಂದಿಗಳ ಸಾವಿನಿಂದ ಸುಮಾರು 40 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ವಿಷ ಇಟ್ಟಿದ್ದಾರೆ.
ಹಂದಿ ಸಾಕಾಣಿಕೆಯಿಂದ ಬದುಕು ಸಾಗಿಸುತ್ತಿರುವ ನಮಗೆ ದಿಢೀರನೇ ಇಷ್ಟೊಂದು ನಷ್ಟ ಎದುರಿಸುವ ಶಕ್ತಿ ಇಲ್ಲ ಎಂದು ಅವರು ಅಲವತ್ತುಕೊಂಡರು.
Advertisement