ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಇದ್ರೂ ತಪ್ಪದ BRTS ಬಸ್ ಅಪಘಾತಗಳು

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ಎರಡು ದಿನಗಳ ಹಿಂದಷ್ಟೇ ಮಹಿಳೆಯ ತಲೆಯ ಮೇಲೆ ಹರಿದಿದ್ದ ಚಿಗರಿ ಬಸ್ ಇಂದು ಮತ್ತೊಂದು ಅಪಘಾತಕ್ಕೆ ಕಾರಣವಾಗಿದೆ. ಇಂದು ಚಿಗರಿ ಬಸ್ಸೊಂದು ಬೈಕ್ ಸವಾರ ನ ಮೇಲೆ ಎರಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸದಾ ಒಂದಿಲ್ಲ ಒಂದು ಅಪಘಾಕ್ಕೆ ಹೆಸರಾಗಿರುವ ಇಲ್ಲಿನ ಬಿ ಆರ್ ಟಿ ಎಸ್ ಚಿಗರಿ ಬಸ್ ಸಂಚಾರದ ನಿರ್ಭಂದಿತ ರಸ್ತೆಯಲ್ಲಿ ಸಂಚರಿಸದಿದ್ದರು ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳುವ ಮುನ್ನ ನೂರು ಬಾರಿ ಯೋಚಿಸಿ ನಡೆದರೂ ಕೂಡ “ನಜರ್ ಹಟಿ ದುರ್ಘಟನಾ ಘಟಿ” ಎಂಬುವಂತಾಗಿದೆ.

ಬೈಕ್ ಸವಾರ ಹಾಗೂ ಚಿಗರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಅಮರನಗರ ನಿವಾಸಿ ಮಹೇಶ್ ಹೊಸಮನಿ (೩೦) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆದರೆ ಬಿ ಆರ್ ಟಿ ಎಸ್ ಚಿಗರಿ ಬಸ್ ಸಂಚಾರ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here