ವಿಜಯಸಾಕ್ಷಿ ಸುದ್ದಿ, ವಿಜಯನಗರ
ಸಿಎಂ ಯಡಿಯೂರಪ್ಪ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಆಗುತ್ತಿದೆ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸುರಪುರ ಶಾಸಕ ರಾಜೂಗೌಡ ಪ್ರತಿಕ್ರಿಯಿಸಿದ್ದಾರೆ.
ಹೊಸಪೇಟೆಯಲ್ಲಿ ಮಾತನಾಡಿದ ಅವರು, ನಮ್ಮದು ದೊಡ್ಡ ಪಕ್ಷ, ಸಿಎಂ ಬದಲಾವಣೆ ವಿಚಾರವಾಗಿ ನಮ್ಮ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಜುಲೈ 26ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಲಿದೆ. ಹೀಗಾಗಿ ಸಿಎಂ
ಅದರ ಹಿಂದಿನ ದಿನ ಔತಣಕೂಡ ಕರೆದಿದ್ದಾರೆ, ಅದನ್ನೇ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ ಅಷ್ಟೆ. ಹೈಕಮಾಂಡ್ ರಾಜೀನಾಮೆ ಕೊಡು ಅಂದ್ರೆ ಕೊಡ್ತಿನಿ ಎಂದು
ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದಾರೆ.
ಕೆಲ ನಮ್ಮ ಶಾಸಕರ ಗೊಂದಲದ ಹೇಳಿಕೆಗಳಿಂದ ಈ ರೀತಿಯಲ್ಲಿ ಸೃಷ್ಟಿಯಾಗಿದೆ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೆ ಸಿಎಂ ಆಗಿರ್ತಾರೆ ಎಂದರು.
ಸಿಎಂ ಯಡಿಯೂರಪ್ಪ ಅವರಿಗೆ ಪಕ್ಷಾತೀತವಾಗಿ ಬೆಂಬಲ ಇದೆ. ಕಾಂಗ್ರೆಸ್ ನ ಶಾಮನೂರು ಶಿವ ಶಂಕ್ರಪ್ಪ, ಎಂ.ಬಿ. ಪಾಟೀಲ್ ಅವರೂ ಬೆಂಬಲ ನೀಡಿದ್ದಾರೆ. ಅವರ ನಿರ್ಧಾರ ನಾವು ಸ್ವಾಗತಿಸುತ್ತೇವೆ ಎಂದರು.
ವಲಸೆ ಬಂದ ಶಾಸಕರು ಅವರ ವೈಯಕ್ತಿಕ ವಿಚಾರಕ್ಕೆ ಸಭೆ ಮಾಡಿರಬಹುದು.
ಯಡಿಯೂರಪ್ಪ ಅವರನ್ನೇ ನಂಬಿ ಬಂದಿದ್ದಾರೆ. ಊಹಾಪೋಹದ ಬಗ್ಗೆ ಚರ್ಚೆ ನಡೆಸಿರಬಹುದು. ಯಾಕೆ ಸಭೆ ಮಾಡಿದ್ದಾರೋ ಗೊತ್ತಿಲ್ಲ. ನಮಗೂ ಮಾಹಿತಿ ಇಲ್ಲ. ಆದರೆ ನಮ್ಮದು ಬಹಳ ಗಟ್ಟಿ ಹೈಕಮಾಂಡ್ ಇದೆ ಎಲ್ಲವನ್ನೂ ಅವರೇ ನಿರ್ಧರ ಮಾಡುತ್ತಾರೆ ಎಂದು ಹೇಳಿದರು.
ದೆಹಲಿಗೆ ಹೋದ್ರೆ ನಾಯಕತ್ವ ಬದಲಾವಣೆ ಆಗುತ್ತದೆ ಅನ್ನೋದಾದ್ರೆ ದಿನಾ 100 ಜನ ಹೋಗ್ತಾರೆ. ಅವರ ವೈಯಕ್ತಿಕ ಕೆಲಸ ಇರ್ತದೆ, ಇಲಾಖೆ ಕೆಲಸ ಇರ್ತದೆ.
ಕೆಲವರದು ಡೆಲ್ಲಿಗೋಗುದು ಒಂದು ಟ್ರಂಡ್ ಆಗಿದೆ. ಅಟ್ ಲೀಸ್ಟ್ ನಾವು ಮಾಧ್ಯಮದಲ್ಲಿ ಬರ್ತಿವಿ ಅನ್ನೋ ಆಸೆಯಿಂದಾದ್ರೂ ಡೆಲ್ಲಿಗೆ ಹೋಗ್ತಾರೆ. ದೆಹಲಿಗೆ ಹೋಗೋದು ವಿಶೇಷ ಏನೂ ಅಲ್ಲಾ, ಇಲ್ಲಿದ್ದು ಯಾರೇ ಕೆಲಸ ಮಾಡಿದ್ರೂ ಅದು ತೋರ್ಸಲ್ಲಾ, ಡೇಲ್ಲಿಗೆ ಹೋದ್ರೆ ಮಾತ್ರ ತೋರಿಸ್ತಾರೆ ಎಂದು ಪ್ರತಿಕ್ರಿಯಿದರು.