ಸ್ವಂತ ಜಮೀನನ್ನೇ ಅಡ ಇಟ್ಟು ಬಡವರಿಗೆ ಔಷಧಿ ತರಿಸಿರುವ ಶಾಸಕ!

0
Spread the love

ವಿಜಯಸಾಕ್ಷಿ ಸುದ್ದಿ, ಮೈಸೂರು

Advertisement

ಕ್ಷೇತ್ರದ ಜನರಿಗಾಗಿ ಸ್ವಂತ ಜಮೀನನ್ನೇ ಶಾಸಕ ಅಡಮಾನ ಇಟ್ಟು ಹೃದಯ ಸ್ಪರ್ಶಿ ಘಟನೆಗೆ ಸಾಕ್ಷಿಯಾಗಿದ್ದಾರೆ. ಜಿಲ್ಲೆಯ ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಈ ರೀತಿ ಮಾದರಿಯ ಜನ ಸೇವೆ ಮಾಡುತ್ತಿರುವ ವ್ಯಕ್ತಿ.

ಕ್ಷೇತ್ರದ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಔಷದಿ ಸಂಪೂರ್ಣವಾಗಿ ಖಾಲಿಯಾಗಿದೆ. ಸಣ್ಷಪುಟ್ಟ ಕಾಯಿಲೆಗೂ ಔಷಧಿ ಸಿಗದೆ ಜನರ ಪರದಾಟ ನಡೆಸುತ್ತಿದ್ದಾರೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ.

ಹಣ ಇಲ್ಲದ ಕಾರಣಕ್ಕೆ ಶಾಸಕರು, ತಮ್ಮ 30 ಎಕರೆ ಜಮೀನನ್ನೇ ಕೇರಳ ಮೂಲದವರಿಗೆ ಅಡಮಾನ ಇಟ್ಟಿದ್ದಾರೆ. ಆ ನಂತರ ಮುಕ್ತ ಮಾರುಕಟ್ಟೆಯಲ್ಲಿ ರೂ. 10 ಲಕ್ಷಕ್ಕೆ ಔಷಧಿ ಖರೀದಿಸಿ ಆಸ್ಪತ್ರೆಗಳಿಗೆ ನೀಡಿದ್ದಾರೆ. ಇದರೊಂದಿಗೆ ಕ್ಷೇತ್ರದ ಜನರ ಸಮಸ್ಯೆ ತೀರಿಸಲು ಈ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಈ ಶಾಸಕರು ಈಗಾಗಲೇ 3 ಅಂಬ್ಯುಲೆನ್ಸ್, ನೂರು ಬೆಡ್ ಗಳನ್ನು ನೀಡಿದ್ದಾರೆ.
ಕೊರೊನಾದ ಈ ಕಷ್ಟ ಕಾಲದಲ್ಲಿ ಜನರಿಗೆ ಸ್ಪಂದಿಸಲೇಬೇಕೆಂದು ಟೊಂಕ ಕಟ್ಟಿ ಈ ಶಾಸಕ ನಿಂತಿದ್ದಾರೆ. ಕಷ್ಟ ಕಾಲದಲ್ಲಿ ಜನ ನನ್ನ ಕೈಹಿಡಿದಿದ್ದಾರೆ. ನನ್ನ ಜನರು ಕಷ್ಟದಲ್ಲಿದ್ದಾಗ ಕೈಹಿಡಿಯುವುದು ನನ್ನ ಧರ್ಮ. ನನ್ನ ಆಸ್ತಿ ಮಾರಿಯಾದರೂ ಜನರ ಕಷ್ಟ ತೀರಿಸುವೆ ಎನ್ನುತ್ತಿದ್ದಾರೆ ಶಾಸಕ ಅನಿಲ್ ಚಿಕ್ಕಮಾದು.


Spread the love

LEAVE A REPLY

Please enter your comment!
Please enter your name here