ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
Advertisement
ಇಲ್ಲಿನ ವಿದ್ಯಾನಗರದ
ಶ್ರೀಹನುಮಾನ್ ಯುವಕ ಮಂಡಳದ ವತಿಯಿಂದ ಶ್ರೀರಾಮನವಮಿ ಆಚರಿಸಲಾಯಿತು. ಮರ್ಯಾದ ಪುರುಷೋತ್ತಮ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೇಶದಲ್ಲಿ ಉಂಟಾಗಿರುವ ಕೊರೋನಾ ಮಹಾಮಾರಿ ತೊಲಗಲಿ, ಜನತೆ ಈ ಸಂಕೋಲೆಯಿಂದ ಪಾರಾಗಲಿ ಎಂದು ಶ್ರೀರಾಮನಲ್ಲಿ ಪ್ರಾರ್ಥಿಸಿದರು.
ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ವಿಧಿಸಿರುವ ಕೋವಿಡ್ ನಿಯಮಾವಳಿಗಳ ಅನ್ವಯ ಸೇರಿದ್ದ ಕೆಲವು ಭಕ್ತಾದಿಗಳಿಗೆ ಶ್ರೀರಾಮನಿಗೆ ಪ್ರಿಯವಾದ ಕೊಸಂಬರಿ, ಪಾನಕ ಪ್ರಸಾದವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹನುಮಾನ್ ಯುವಕ ಮಂಡಳದ ಸರ್ವ ಸದಸ್ಯರು, ರಾಮನ ಭಕ್ತರು ಉಪಸ್ಥಿತರಿದ್ದರು.