ಹಾವು ಹಿಡಿದು ಕಚ್ಚಿಸಿಕೊಂಡ ವೃದ್ಧ; ಸಾವನ್ನಪ್ಪಿದ ಬಳಿಕವಷ್ಟೇ ಕೈಯಿಂದ ಹಾವು ಬಿಟ್ಟ

0
Spread the love

ವಿಜಯಸಾಕ್ಷಿ ಸುದ್ದಿ, ಯಾದಗಿರಿ:

Advertisement

ಇತ್ತೀಚೆಗೆ ಕೆಲವರು ಸಾಹಸಕ್ಕೋ.. ಪ್ರಚಾರಕ್ಕೋ.. ಹುಚ್ಚುತನಕ್ಕೋ.. ಅಥವಾ ಬಂಡ ಧೈರ್ಯ ಪ್ರದರ್ಶಿಸಲಿಕ್ಕೋ.. ಗೊತ್ತಿಲ್ಲ. ಸರಿಸೃಪಗಳನ್ನು ಕೈಯಲ್ಲಿ ಹಿಡಿದು ಅಲೆದಾಡುವುದು, ಮೈಮೇಲೆ ಹಾಕಿಕೊಂಡು, ಕೊರಳಲ್ಲಿ ಸುತ್ತಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗೆ ಮಾಡಲು ಹೋಗಿ ಕೆಲವರು ಪ್ರಾಣ ಕಳೆದುಕೊಂಡದ್ದು ಉಂಟು. ಅಂತಹದ್ದೇ ಒಂದು ಘಟನೆ ಯಾದಗಿರಿ ಜಿಲ್ಲೆಯ ಗೋಡಿಹಾಳ ಗ್ರಾಮದಲ್ಲಿ ನಡೆದಿದೆ.

ವಡಿಗೇರಾ ತಾಲೂಕಿನ ಗೋಡಿಹಾಳ ಗ್ರಾಮದ ಮನೆಯೊಂದರಲ್ಲಿ ಹೋಗುತ್ತಿದ್ದ ಹಾವನ್ನು ಹಿಡಿದು ಕಚ್ಚಿಸಿಕೊಂಡ ಪರಿಣಾಮ ಬಸವರಾಜ್ ಪೂಜಾರ್ ಎಂಬ ವೃದ್ಧ ಸಾವನ್ನಪ್ಪಿದ್ದಾನೆ. ಬಸವರಾಜ್ ವಯಸ್ಸಾಗಿದ್ದರೂ, ಹಾವು ಹಿಡಿಯುವ ಕಾಯಕ ಬಿಟ್ಟಿರಲಿಲ್ಲ. ಆದರೆ, ಈ ಬಾರಿ ಹಾವಿನ ಗಾತ್ರ ದೊಡ್ಡದಿರುವ ಕಾರಣಕ್ಕೆ ಕಚ್ಚಿಸಿಕೊಂಡಿದ್ದು, ಮೃತಪಟ್ಟ ಬಳಿಕವಷ್ಟೇ ಹಾವನ್ನು ಕೈ ಬಿಟ್ಟಿದ್ದಾನೆ. ಬಳಿಕ ಗ್ರಾಮಸ್ಥರು ಹಾವನ್ನು ಹೊಡೆದು ಕೊಂದಿದ್ದಾರೆ.

ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಯಾರದ್ದೇ ಮನೆಯಲ್ಲಿ ಹಾವು ಬಂದಿದೆ ಅಂದರೆ‌‌ ಸಾಕು ಅದನ್ನು ಹಿಡಿದು‌ ಊರಿಂದಾಚೆಗೆ ಬಿಟ್ಟು ಬರುತ್ತಿದ್ದ. ಹೀಗೆ ಹಾವು ಹಿಡಿಯುವ ಕಾಯಕದಲ್ಲಿ ತೊಡಗಿದ್ದ ವೃದ್ಧ
ಗ್ರಾಮದಲ್ಲಿ 300ಕ್ಕೂ ಹೆಚ್ಚು ಹಾವುಗಳನ್ನ ಹಿಡಿದು ಬಿಟ್ಟು ಬಂದಿದ್ದ.


Spread the love

LEAVE A REPLY

Please enter your comment!
Please enter your name here