ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ಹಿಂದೂ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಯುವಕರು ನೆರವೇರಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ವಿಕಾಸನಗರದ ೮೫ ವರ್ಷದ ವೃದ್ದ ಸಾವನ್ನಪ್ಪಿದ ದುರ್ದೈವಿ. ವಿಠ್ಠಲರಾವ್ ಮಹೇಂದ್ರಕರ್ ಕೆಲದಿನಗಳಿಂದ ಅಸ್ವಸ್ಥರಾಗಿದ್ದರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ನಿನ್ನೆ ಸಾಯಂಕಾಲ ಸಾವನ್ನಪ್ಪಿದ್ದರು. ಅವರ ಮಗ ಗಿಣಗೇರಿಯ ಅಲ್ಟ್ರಾಟೆಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೂ ಕೂಡ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಮೃತರ ಅಂತ್ಯಕ್ರಿಯೆ ನೆರವೇರಿಸಲು ಯಾರೂ ಮುಂದೆ ಬಾರದ ಕಾರಣಕ್ಕೆ
ಕೊಪ್ಪಳದ ಜಮಾತೇ ಇಸ್ಲಾಂನ ಸಂಘಟನೆಯ ಹ್ಯುಮಾನೇಟಿರಿಯನ್ ರೀಲಿಪ್ ಸೊಸೈಟಿಯ ಕಾರ್ಯಕರ್ತರು ಅಂತ್ಯಕ್ರಿಯೆ ನೆರವೇರಿಸಿದರು.
ದಾವಣಗೆರೆಯಿಂದ ಬಂದಿದ್ದ ಅವರ ಸಂಬಂಧಿಯ ಸಮ್ಮುಖದಲ್ಲಿ
ಹಿಂದೂ ಪದ್ಧತಿಯಂತೆ ಗವಿಮಠದ ಹಿಂಭಾಗದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ
ಕುಟುಂಬಸ್ಥರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಅಂಬುಲೆನ್ಸ ಚಾಲಕ ವಿಕಾಸ ನಗರದಿಂದ ಸ್ಮಶಾನಕ್ಕೆ ಮೃತ ದೇಹ ತರಲು ೧೨ ಸಾವಿರ ಬೇಡಿಕೆ ಇಟ್ಟಿದ್ದಾನೆ. ರಾತ್ರಿ ವೇಳೆ ಕೊಡಲು ದುಡ್ಡಿಲ್ಲದ ಕುಟುಂಬಸ್ಥರು ೮ ಸಾವಿರ ಕೊಟ್ಟು ಬೆಳಿಗ್ಗೆ ೪ ಸಾವಿರ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.
ಒಂದೆಡೆ ಅಂಬುಲೆನ್ಸ್ ಚಾಲಕನ ಅಮಾನವೀಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದ್ದರೆ ಮಾನವೀಯತೆ ಮೆರೆದ
ಮುಸ್ಲಿಂ ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇದರಲ್ಲಿ ಜಮಾತ್ ನ ಅಧ್ಯಕ್ಷ ಸಯ್ಯದ್ ಹಿದಯತ್ ಅಲಿ, ಗ್ರೂಪ್ ಲೀಡರ್ ಮಹಮ್ಮದ್ ಖಲೀಲ್, ಅಸ್ಗರ್ ಖಾನ್, ಗೌಸ್ ಪಟೇಲ್, ಸಜೀದ್ ಹುಸೇನ್, ರಹಮತ್ ಹುಸೈನ್, ಮಹಮ್ಮದ್ ಅಖೀಲ್ ಎಸ್ ಐ ಓ ಸದಸ್ಯರು ಭಾಗವಹಿದ್ದರು.