ಎಚ್ಕೆ ವಿರುದ್ಧ ಏಕ ವಚನದಲ್ಲಿ ಮಾತನಾಡಬಾರದಿತ್ತು; ಸಿ ಸಿ ಪಾಟೀಲ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಅವರು ಏಕವಚನದಲ್ಲಿಯೇ ಮಾತನಾಡಿದ್ದರು. ಸದ್ಯಕ್ಕೆ ಈ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಸುಟ್ಟ ಮನೆಯಲ್ಲಿ ಗಳ ಎಣಿಸುವ ವ್ಯಕ್ತಿ. ಟೂಲ್ ಕಿಟ್’ನ ಪ್ರಮುಖ ರೂವಾರಿ ಎಚ್.ಕೆ. ಪಾಟೀಲ್ ಎಂದು ಆರೋಪಿಸಿದ್ದರು.

ಪಾಟೀಲರು ಹೇಳುವುದೆಲ್ಲ ವೇದವಾಕ್ಯವೇ? ಎಂದು ಪ್ರಶ್ನಿಸಿದ್ದ ಅವರು, ಒಂದು ವೇಳೆ ಎಚ್.ಕೆ. ಪಾಟೀಲ್ ಸಚಿವರಾಗಿದ್ದ ಸಂದರ್ಭದಲ್ಲಿ ಕೋವಿಡ್ ಬಂದಿದ್ದರೆ, ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಹೆಣಗಳ ರಾಶಿ ಬೀಳುತ್ತಿದ್ದವು. ಅವರು ಕೆವಿಕೆಯಲ್ಲಿ ಕದ ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದರು. ಇತ್ತ ಜನರು ಹೆಣವಾಗುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಮೇಲೆ ವಿಶ್ವಾಸ ಇಲ್ಲವೆಂದರೇ ಅವನನ್ನೇ ಮಂತ್ರಿಮಾಡಬೇಕಿತ್ತು ಎಂದು ಎಚ್.ಕೆ. ಪಾಟೀಲ ಅವರ ವಿರುದ್ಧ ಏಕ ವಚನದಲ್ಲಿಯೇ ಸಂಬೋಧಿಸಿದ್ದರು. ಸದ್ಯ ಈ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಅಂದು ನಾನು ಮಾತಿನ ಭರದಲ್ಲಿ ತಾಳ್ಮೆ ಕಳೆದುಕೊಂಡು ಮಾತನಾಡಿದ್ದೆ. ಆ ಸಂದರ್ಭದಲ್ಲಿ ನಾನು ಹಿರಿಯ ನಾಯಕರ ಬಗ್ಗೆ ಏಕವಚನದಲ್ಲಿಯೇ ಮಾತನಾಡಿದ್ದೆ. ಆ ರೀತಿ ಮಾತನಾಡ ಬಾರದಿತ್ತು. ಹೀಗಾಗಿ ಆ ಮಾತನ್ನು ಹಿಂಪಡೆಯುತ್ತಿದ್ದೇನೆ. ಅಲ್ಲದೇ, ಆ ಮಾತಿಗೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here