ವಿಜಯಸಾಕ್ಷಿ ಸುದ್ದಿ, ಗದಗ
ಕೊರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದ ಮೂಲೆ ಮೂಲೆಯಲ್ಲಿಯೂ ಪೊಲೀಸರು ಲಾಠಿ ಬೀಸಿ ದಾರಿ ತಪ್ಪಿದವರನ್ನು ಮನೆಯ ಕಡೆಗೆ ಸಾಗಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕೂಡ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಪೊಲೀಸರು ಪುಟ್ಟರಾಜ ಸರ್ಕಲ್ ಬಳಿ ಬೈಕ್ ಸೀಜ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಯಲ್ ಎನ್ ಫೀಲ್ಡ್ ಏರಿ ಬಂದಿದ್ದ ಯುವಕನಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೀ ತೆಗೆಯುವಾಗ ಬೈಕ್ ಏಕಾ ಏಕಿ ನುಗ್ಗಿದೆ. ಈ ವೇಳೆ ಬೈಕ್ ಆಯತಪ್ಪಿ ಪಿಎಸ್ ಐ ಕಮಲಾಭಾಯಿ ಅವರಿಗೆ ತಾಗಿದೆ. ಕೂಡಲೇ ಸಹೋದ್ಯೋಗಿಯ ಸಹಾಯದಿಂದ ಪಿಎಸ್ ಐಗೆ ಗಾಯವಾಗಲಿಲ್ಲ.

ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಪುಟ್ಟರಾಜ ಸರ್ಕಲ್, ದತ್ತಾತ್ರೇಯ ಸರ್ಕಲ್, ಮುಳಗುಂದ ನಾಕಾ, ಮಹೇಂದ್ರಕರ ಸರ್ಕಲ್, ಸರಾಫ್ ಬಜಾರ್ ಗೆ ತೆರಳದಂತೆ ಬ್ಯಾರಿಕೇಡ್ ಹಾಕಲಾಗಿದೆ. ಸರ್ಕಾರ ಎಷ್ಟೇ ಕಠಿಣ ನಿಯಮ ಜಾರಿಗೊಳಿಸಿದರೂ ಹಲವರು ಬೈಕ್ ತೆಗೆದುಕೊಂಡೇ ಮಾರುಕಟ್ಟೆಗೆ ಆಗಮಿಸುತ್ತಿದ್ದರು. ಹೀಗಾಗಿ ಪೊಲೀಸರು ಬೈಕ್ ಗಳನ್ನು ಸೀಜ್ ಮಾಡಿದ್ದಾರೆ. ಇದರಿಂದಾಗಿ ಮಾರುಕಟ್ಟೆಗಳು ಕೂಡ ಬಿಕೊ ಎನ್ನುತ್ತಿದ್ದವು.

ಹಲೆವೆಡೆ ಬೈಕ್ ಸವಾರರು ಬೈಕ್ ಗಳನ್ನು ತೆಗೆದುಕೊಂಡು ಹೋಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ದೊಡ್ಡವರ ಕೈಯಿಂದ ಹೇಳಿಸಿದರೂ ಪೊಲೀಸರು ಬೈಕ್ ನೀಡುತ್ತಿಲ್ಲ. ಹೀಗಾಗಿ ಹಲವರು ಮೇಡಂ ಬೈಕ್ ಕೊಡಿ ಕೈ ಮುಗಿತೇನಿ ಎಂದು ಪಿಎಸ್ ಐ ಕಮಲಾ ಅವರಲ್ಲಿ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹುಲಕೋಟಿ ಗ್ರಾಮದಿಂದ ತರಕಾರಿ ತರಲು ಬೈಕ್ ಮೇಲೆ ದಂಪತಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪಿಎಸ್ ಐ ಕಮಲಾ ಅವರು ಬೈಕ್ ಸೀಜ್ ಮಾಡಿದರು. ಆಗ ಕೈ ಮುಗಿತೇವಿ ಬೈಕ್ ಕೊಡಿ ಎಂದು ಎಷ್ಟೇ ಅಂಗಲಾಚಿದರೂ ಬೈಕ್ ನೀಡಲಿಲ್ಲ.