ಹೆತ್ತವರೊಂದಿಗೆ ಕಿರಿಕ್; ಚಿಕ್ಕಪ್ಪನನ್ನೇ ಕೊಲೆಗೈದ ಮಗ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಹೆತ್ತ ತಾಯಿ-ತಂದೆಗೆ ಅವಾಚ್ಯವಾಗಿ ನಿಂದಿಸುತ್ತಿದ್ದ ಚಿಕ್ಕಪ್ಪನನ್ನೇ ಯುವಕನೋರ್ವ ಚಾಕುವಿನಿಂದ ಇರಿದು ಕೊಲೆಗೈದ ದುರ್ಘಟನೆ ಗದಗನ ಬೆಟಗೇರಿಯಲ್ಲಿ ನಡೆದಿದೆ.

ಬೆಟಗೇರಿಯ ಕುರಹಟ್ಟಿ ಪೇಟೆಯ ಮೈಲಾರ ಲಿಂಗಪ್ಪನ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.

ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಮಂಜುನಾಥ್ ಗದುಗಿನ ಕೊಲೆಯಾದ ದುರ್ಧೈವಿ.

ಪ್ರವೀಣ ಗದುಗಿನ ಎಂಬಾತನೇ ಕೊಲೆಗೈದ ಆರೋಪಿ ಎನ್ನಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಯಾದ ಮಂಜುನಾಥ್, ಆರೋಪಿ ಪ್ರವೀಣ್ ಇಬ್ಬರು ಸಂಬಂಧಿಕರಾಗಿದ್ದು, ವರೆಸೆಯಲ್ಲಿ ಕಾಕಾ,ಮಗ ಎನ್ನಲಾಗಿದೆ.

ಆದರೆ ಇಬ್ಬರು ಬಾರ್ ಬೆಂಡಿಂಗ್ ಕೆಲಸ ಮಾಡುತಿದ್ದರು. ಕೊಲೆಯಾದ ಮಂಜುನಾಥ್, ಆರೋಪಿ ಪ್ರವೀಣನ ತಂದೆ ತಾಯಿಯ ಜೊತೆಗೆ ಆಗಾಗ ಜಗಳ ಮಾಡುತ್ತಿದ್ದನಂತೆ, ಹೀಗಾಗಿ ಇದರಿಂದ ಚಿಕ್ಕಪ್ಪನ ವರ್ತನೆಗೆ ಬೇಸತ್ತು ಕೊಲೆ ಮಾಡಿದ್ದಾನೆ ಅಂತ ಪೊಲೀಸ ಮೂಲಗಳಿಂದ ತಿಳಿದುಬಂದಿದೆ.

ಸುದ್ದಿ ತಿಳಿದ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಕುರ್ಕಿ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ‌ಪರಿಶೀಲನೆ ನಡೆಸಿ ಆರೋಪಿ ಪ್ರವೀಣನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here